ಹಾಡಹಗಲೇ ವೃದ್ಧೆ ಅಡ್ಡಗಟ್ಟಿ ದರೋಡೆ

34

Get real time updates directly on you device, subscribe now.


ಕೊಡಿಗೇನಹಳ್ಳಿ: ಹಾಲು ಕರೆದುಕೊಂಡು ಮನೆಗೆ ಬರುತ್ತಿದ್ದಾಗ ಒಂಟಿ ವೃದ್ಧೆಯನ್ನು ಅಡ್ಡಗಟ್ಟಿ ಕಿವಿಯೋಲೆ ಹಾಗೂ ಸರಗಳ್ಳತನ ಮಾಡಿರುವ ಘಟನೆ ನಡೆದಿದೆ.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗುಂಡಗಲ್ಲು ಗೇಟ್ ನಿವಾಸಿ ಲೇ.ಬಿದ್ರಣ್ಣ ಎಂಬುವವರ ಪತ್ನಿ ಪಾರ್ವತಮ್ಮ ಎಂಬುವವರು ಎಂದಿನಂತೆ ಬೆಳಗ್ಗೆ 7 ಗಂಟೆ ಸಮಯದಲ್ಲಿ ಪಕ್ಕದ ಜಮೀನಿನಲ್ಲಿ ಹಾಲು ಕರೆದುಕೊಂಡು ಬರುವಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಪಾರ್ವತಮ್ಮನ ಕೊರಳಿನಲ್ಲಿದ್ದ 20 ಗ್ರಾಂ ಚಿನ್ನದ ಸರ ಹಾಗೂ ಎರಡು ಕಿವಿಯಲ್ಲಿದ್ದ ಸುಮಾರು 5 ಗ್ರಾಂ ಓಲೆ ಮತ್ತು ಹ್ಯಾಂಗಿಗ್ಸ್ ಕಿತ್ತುಕೊಂಡು ರಸ್ತೆ ಪಕ್ಕದಲ್ಲಿದ್ದ ಗುಂಡಿಗೆ ತಳ್ಳಿ ಪರಾರಿಯಾಗಿದ್ದಾರೆ.
ಪಾರ್ವತಮ್ಮನ ಎರಡು ಕಿವಿಗಳಿಗೆ ಹೊಲಿಗೆ ಹಾಕಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ಸುಮಾರು 1 ಲಕ್ಷ 25 ಸಾವಿರ ಬೆಲೆ ಬಾಳುವ ಒಡವೆ ದೋಚಿರುವ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ಥಳಕ್ಕೆ ಡಿವೈಎಸ್ ಪಿ ರಾಮಚಂದ್ರಪ್ಪ, ಪಿಎಸೈ ಶ್ರೀನಿವಾಸ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಬಗ್ಗೆ ಕೊಡಿಗೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!