ತೋಟದಲ್ಲಿ ರೈತ ಬೆಂಕಿಗಾವುತಿ

33

Get real time updates directly on you device, subscribe now.


ಕುಣಿಗಲ್: ತೋಟದಲ್ಲಿ ಬಿದ್ದಿದ್ದ ಕಸಕ್ಕೆ ಬೆಂಕಿ ಹಚ್ಚಿದ್ದ ರೈತ ಬೆಂಕಿಗೆ ಆಹುತಿ ಆಗಿರುವ ಧಾರಣ ಘಟನೆ ನಡೆದಿದೆ.
ಮೃತ ರೈತನನ್ನು ಕುಣಿಗಲ್ ತಾಲೂಕಿನ ಗಿಡದ ಪಾಳ್ಯ ಗ್ರಾಮದ ರಾಮಣ್ಣ (65) ಎಂದು ಗುರುತಿಸಲಾಗಿದೆ, ರೈತ ತನ್ನ ತೋಟದಲ್ಲಿದ್ದ ತೆಂಗಿನ ಮರದಿಂದ ಬಿದ್ದಿದ್ದ ಗರಿಗಳು ಹಾಗೂ ಇತರೆ ಕಸಕ್ಕೆ ಒಂದೆಡೆ ಗುಡ್ಡೆ ಹಾಕಿ ಬೆಂಕಿ ಹಾಕಿದ್ದು, ಆಕಸ್ಮಿಕವಾಗಿ ಬೆಂಕಿಗೆ ಬಿದ್ದು ಗಾಯಗೊಂಡಿದ್ದಾರೆ, ಚಿಕಿತ್ಸೆಗೆ ಕುಣಿಗಲ್ ಆಸ್ಪತ್ರೆಗೆ ಕರೆತರುವ ವೇಳೆ ಮೃತಪಟ್ಟಿದ್ದಾರೆ, ಸಂಬಂಧಿಕರು ನೀಡಿದ ದೂರಿನ ಮೇಲೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!