ಬಸ್ ನ ಗಾಜುಗಳು ಪುಡಿ ಪುಡಿ

251

Get real time updates directly on you device, subscribe now.

ಮಧುಗಿರಿ: ಮಧುಗಿರಿ ಪಾವಗಡ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿಯ ಎರಡು ಬಸ್ಗಳಿಗೆ ಪ್ರತ್ಯೇಕ ಸಮಯದಲ್ಲಿ ಕಲ್ಲಿನಿಂದ ಹೊಡೆದ ಪರಿಣಾಮ ಬಸ್ನ ಗಾಜುಗಳು ಪುಡಿಪುಡಿಯಾದ ಘಟನೆ ನಡೆದಿದೆ.
ಪಾವಗಡ ಕಡೆಯಿಂದ ಮಧುಗಿರಿಗೆ ಆಗಮಿಸುತ್ತಿದ್ದ ಬಸ್ಸನ್ನು ಜಡೇಗೊಂಡನಹಳ್ಳಿ ಸಮೀಪ ದ್ವಿಚಕ್ರ ವಾಹನದಲ್ಲಿ ಮೂರು ಜನರು ಬಂದು ಅದರಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಯ ನೌಕರ ರಂಗನಾಥ್ ಎಂಬುವವನು ಕಲ್ಲಿನಿಂದ ಬಸ್ಸಿನ ಗಾಜುಗಳನ್ನು ಹೊಡೆದು ಹಾಕಿರುತ್ತಾನೆ, ಇದರಿಂದ ಸರ್ಕಾರಕ್ಕೆ 15 ಸಾವಿರ ನಷ್ಟವಾಗಿರುತ್ತದೆ. ರಂಗನಾಥ ಮತ್ತು ಇಬ್ಬರು ತಲೆಮರೆಸಿಕೊಂಡಿದ್ದಾರೆ.
ತಾಲೂಕಿನ ಬಸವನಹಳ್ಳಿ ಸಮೀಪ ಇರುವ ಮಾರಮ್ಮನ ದೇವಸ್ಥಾನದ ಬಳಿ ಮಧುಗಿರಿಯಿಂದ ಡಿಪೋಗೆ ವಾಪಾಸ್ ಆಗುತ್ತಿ ದ್ದ ಕೆಎಸ್ಆರ್ಟಿಸಿ ಬಸ್ ಹಿಂಭಾಗಕ್ಕೆ ಬಸವನಹಳ್ಳಿ ಗ್ರಾಮದ ನಟರಾಜು ಮತ್ತು ಮಲ್ಲಗೊಂಡ ಸಿಂಗ್ರಿಗೌಡ ಹಾಗೂ ಮತ್ತೋರ್ವ ಸೇರಿಕೊಂಡು ಬಸ್ಗೆ ಕಲ್ಲು ಎಸೆದು ಹಿಂಬದಿಯ ಗಾಜನ್ನು ಹೊಡೆದು ಸರ್ಕಾರಕ್ಕೆ 15 ಸಾವಿರ ರೂ. ಗಳನ್ನು ನಷ್ಟ ಮಾಡಿರುತ್ತಾರೆ.
ಆರೋಪಿ ನಟರಾಜುನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಮಧುಗಿರಿ ಪಿ.ಎಸ್.ಐ ಮಂಗಳಗೌರಮ್ಮ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!