ಹುಳಿಯಾರಿನ ಮನೆಯಲ್ಲಿ ಕಳ್ಳತನ

33

Get real time updates directly on you device, subscribe now.


ಹುಳಿಯಾರು: ಹುಳಿಯಾರಿನ ಗಾಂಧಿ ಪೇಟೆಯಲ್ಲಿರುವ ದಿವಂಗತ ಹಣ್ಣಿನ ಅಂಗಡಿ ಜೈಕಾಂತ್ ಅವರ ಮನೆಯಲ್ಲಿ ಭಾನುವಾರ ರಾತ್ರಿ ಕಳ್ಳತನವಾಗಿದೆ.
ಮನೆಯಲ್ಲಿ ದಿ.ಜೈಕಾಂತ್ ಅವರ ಪತ್ನಿ ಸುಜಾತ ಹಾಗೂ ಮಗ ಸಂಜೀವ್ ಮೂರ್ತಿ ಇದ್ದು, ಅವರಿಬ್ಬರೂ ರಾತ್ರಿ ಗಾಢ ನಿದ್ರೆಯಲ್ಲಿದ್ದಾಗ ಕಳ್ಳತನ ಜರುಗಿದೆ, ಟೆರೆಸ್ ಮೇಲಿಂದ ಇಳಿದು ಮಹಡಿ ಮೇಲಿನ ಬಾಗಿಲು ಒಡೆದು ಒಳಗೆ ನುಗ್ಗಿರುವ ಕಳ್ಳ, ದೇವರ ಮನೆಯಲ್ಲಿದ್ದ ಸ್ವಲ್ಪ ಬೆಳ್ಳಿ ಹಾಗೂ ರೂಮಿನ ವಾರ್ಡ್ ರೋಬ್ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾನೆ.
ಮನೆಯಲ್ಲಿ ಇಬ್ಬರೇ ಇದ್ದು, ಬೆಳಗ್ಗೆ ಎದ್ದಾಗ ಕಳ್ಳತನದ ಘಟನೆ ಗಮನಕ್ಕೆ ಬಂದಿದೆ, ಹುಳಿಯಾರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೆರಳಚ್ಚು ತಜ್ಞರು ಸಹ ಪರಿಶೀಲನೆ ನಡೆಸಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!