ಬಸ್ ಬೈಕ್ ಡಿಕ್ಕಿ- ಇಬ್ಬರ ದುರ್ಮರಣ

32

Get real time updates directly on you device, subscribe now.


ಹುಳಿಯಾರು: ಕೆ ಎಸ್ ಆರ್ ಟಿ ಸಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವನಪ್ಪಿರುವ ಘಟನೆ ಹುಳಿಯಾರು ಹೋಬಳಿಯ ಯಳನಾಡು ಬಳಿ ಜರುಗಿದೆ.
ಹುಳಿಯಾರು ಹೋಬಳಿಯ ಸಿಂಗಾಪುರ ಗ್ರಾಮದ ಕೆಂಪರಾಜು (29) ಹಾಗೂ ಕಿರಣ್ ಬಾಬು (20) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಇವರಿಬ್ಬರೂ ಹುಳಿಯಾರಿನಿಂದ ಸ್ವಗ್ರಾಮ ಸಿಂಗಾಪುರಕ್ಕೆ ಹೋಗುವಾಗ ಹೊಸದುರ್ಗದಿಂದ ಹುಳಿಯಾರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಗೆ ಮುಖಮುಖಿ ಡಿಕ್ಕಿಯಾಗಿದೆ, ಪರಿಣಾಮ ಬೈಕ್ ಸವಾರರಿಬ್ಬರಿಗೂ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ, ಕೆಂಪರಾಜು ಅವರಿಗೆ ಮದುವೆಯಾಗಿದ್ದು ಎಂಟು ತಿಂಗಳ ಮಗು ಇದೆ, ಇಬ್ಬರು ಸೋದರ ಸಂಬಂಧಿಕರಾಗಿದ್ದಾರೆ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!