ಚಿಕ್ಕನಾಯಕನಹಳ್ಳಿ: ಪಟ್ಟಣದ ಸಮೀಪದ ದಬ್ಬೇಘಟ್ಟ ಗ್ರಾಮದ ತೋಟದಲ್ಲಿ ಗೋವಿಂದರಾಜು ಎಂಬ ರೈತನಿಗೆ ಸೇರಿದ ಕೇಬಲ್ ಕಳ್ಳತನವಾಗಿದ್ದು ಕೇಬಲ್ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸುವಂತೆ ರೈತ ಗೋವಿಂದರಾಜ್ ಆಗ್ರಹಿಸಿದ್ದಾರೆ.
ಮಳೆ ಇಲ್ಲದೆ ವಿಪರೀತ ಬಿಸಿಲಿನಿಂದ ತೆಂಗು ಅಡಿಕೆ ಮರಗಳನ್ನು ಉಳಿಸಿಕೊಳ್ಳುವುದೆ ದೊಡ್ಡ ಸಮಸ್ಯೆಯಾಗಿದ್ದು ಬೋರ್ ವೆಲ್ ಗಳಲ್ಲಿಯೂ ನೀರು ಕಡಿಮೆಯಾಗಿದೆ, ಇರುವ ನೀರಿನಲ್ಲಿಯೇ ಮರ ಗಿಡಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಮಾಡುತ್ತಿರುವಾಗ ಸಾಲ ಸೋಲ ಮಾಡಿ ತಂದಿದ್ದ ಬೋರ್ ವೆಲ್ ಕೇಬಲ್ ಕಳ್ಳತನ ಮಾಡಿದರೆ ನಮ್ಮ ಗತಿ ಏನೂ, ಸುಮಾರು 20 ಸಾವಿರಕ್ಕೂ ಹೆಚ್ಚು ಬೆಲೆಯ ಕೇಬಲ್ ಕಳ್ಳತವಾಗಿದ್ದು ಹಾಗೂ ಮೋಟರ್ ತುಂಡು ಮಾಡಿ ಹೋಗಿದ್ದಾರೆ ಮತ್ತೆ ಅವುಗಳನ್ನು ಖರೀದಿ ಮಾಡಲು ಸಾಲ ಮಾಡಬೇಕು ತೋಟದಲ್ಲಿ ಆದಾಯವಿಲ್ಲ, ದಯಮಾಡಿ ಪೊಲೀಸ್ ಇಲಾಖೆ ಇಂತಹ ಕೃತ್ಯ ಮಾಡುವವರನ್ನು ಬಂಧಿಸಿ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಗೋವಿಂದರಾಜ್ ಮನವಿ ಮಾಡಿದ್ದಾರೆ.
ರೈತನ ತೋಟದಲ್ಲಿ ಕೊಳವೆ ಬಾವಿಯ ಕೇಬಲ್ ಕಳ್ಳತನ
Get real time updates directly on you device, subscribe now.
Prev Post
Comments are closed.