ಬೆಂಕಿ ಅವಘಡ- ಕಟುಂಬಗಳಿಗೆ ಶಾಶ್ವತ ಪರಿಹಾರಕ್ಕೆ ಸ್ವಾಮೀಜಿ ಆಗ್ರಹ

26

Get real time updates directly on you device, subscribe now.


ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದ ಕಾರಣದಿಂದಾಗಿ ಸುಮಾರು ಹತ್ತಕ್ಕೂ ಹೆಚ್ಚು ಗುಡಿಸಲು ಭಸ್ಮವಾಗಿ ಕುರಿ ಮೇಕೆಗಳು ಜೀವಂತವಾಗಿ ಸುಟ್ಟು ಹೋಗಿ, ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿದ್ದವು, ಘಟನೆಯ ಮಾಹಿತಿ ಪಡೆದ ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಠದ ಡಾ.ಹನುಮಂತನಾಥ ಸ್ವಾಮೀಜಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಡವರಿಗೆ ಶಾಶ್ವತ ಸೂರು ಕಲ್ಪಿಸಿ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಸಂತ್ರಸ್ತರಿಗೆ ಚಾಪೆ,ಬಟ್ಟೆ, ಪುಸ್ತಕ ಸೇರಿದಂತೆ ಆಹಾರಧಾನ್ಯ ವಿತರಣೆ ಮಾಡಿ ಮಾಧ್ಯಮಗಳಲ್ಲಿ ಭಿತ್ತರವಾದ ಘಟನೆ ನೋಡಿ ಬಹಳ ಬೇಸರವಾಯಿತು, ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಗೃಹ ಸಚಿವರಲ್ಲಿ ಘಟನೆಯ ಸಂಬಂಧ ಮಾತನಾಡಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯ ಮಾಡಿದ್ದೇನೆ, ಈ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಕೂಡಲೇ ಸಂಬಂಧಪಟ್ಟವರ ಅಧಿಕಾರಿಗಳ ಜೊತೆಗೆ ಚರ್ಚಿಸಿ ನಿವೇಶನ ರಹಿತ ಬಡವರಿಗೆ ಸೂರು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

ಯಾವುದೇ ಭಾಗದಲ್ಲಿ ಬಡವರಿಗೆ ಇಂತಹ ಸಂದಿಗ್ಧ ಪರಿಸ್ಥಿತಿ ಬಂದಾಗ ಮಠಮಾನ್ಯಗಳು ಸಹಾಯ ಹಸ್ತ ತೋರುವ ಕೆಲಸ ಕಾರ್ಯ ಮಾಡುತ್ತಾ ಬಂದಿವೆ, ಅದೇ ರೀತಿಯಾಗಿ ಕುಂಚಿಟಿಗ ಶ್ರೀಮಠದಿಂದ ಬೀದಿಗೆ ಬಿದ್ದ ಬಡವರಿಗೆ ದಿನ ಬಳಕೆಯ ವಸ್ತುಗಳನ್ನ ಖರೀದಿಸಿ ತಂದುಕೊಡಲಾಗಿದ್ದು, ಬಡವರಿಗೆ ಶಾಶ್ವತ ಸೂರು ನಿರ್ಮಾಣ ಮಾಡುವಲ್ಲಿ ಅವರ ಜೊತೆಗೆ ಹೋರಾಟ ಮಾಡಲು ಸಿದ್ಧನಿದ್ದೇನೆ, ಇಲ್ಲಿಗೆ ಅಧಿಕಾರಿಗಳು ಸರ್ವೆ ಮಾಡಲು ಬಂದರೆ ಇಲ್ಲಿನ ಜನರು ಸ್ಪಂದಿಸಬೇಕು, ಈ ವಿಚಾರವಾಗಿ ಮತ್ತೊಮ್ಮೆ ಗೃಹ ಸಚಿವರ ಬಳಿ ಮಾತನಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿಗ್ರಾಮ ಪಂಚಾಯತಿ ಸದಸ್ಯ ಶಿವಕುಮಾರ್ ಮಾತನಾಡಿ ಊರಿನ ಹೊರ ವಲಯದಲ್ಲಿ ನಿವೇಶನ ವಂಚಿತರು ಅನೇಕ ವರ್ಷಗಳಿಂದ ಗುಡಿಸಲುಗಳನ್ನ ಹಾಕಿಕೊಂಡಿದ್ದಾರೆ, ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಹತ್ತು ಗುಡಿಸಲು ಸಂಪೂರ್ಣವಾಗಿ ಭಸ್ಮವಾಗಿ ಗುಡಿಸಿಲಿನಲ್ಲಿದ್ದ ವಸ್ತು ಸುಟ್ಟು ಬೂದಿಯಾಗಿವೆ, ಈ ಸಂಬಂಧ ಅಧಿಕಾರಿಗಳೊಡನೆ ಚರ್ಚಿಸಿ ತಕ್ಷಣಕ್ಕೆ ಸಂತ್ರಸ್ತರಿಗೆ ಊಟ ವಸತಿ ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿ ಅರಿತ ಸ್ವಾಮೀಜಿ ಹಾಗೂ ಇತರರು ಇವರ ಸಹಾಯಕ್ಕೆ ಧಾವಿಸಿದ್ದು ಅಭಿನಂದನೀಯ ಹಾಗೂ ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದರು.

ಶಿವ ಮಹಾಲಕ್ಷ್ಮಿ ನವಗ್ರಹ ಆಂಜನೇಯ ಸೇವಾ ಟ್ರ್ಟ್ ಅಧ್ಯಕ್ಷ ಎಸ್.ನಟರಾಜು ಮಾತನಾಡಿ, ಬಡವರ ಬದುಕಿಗೆ ಬೆಂಕಿ ಬಿದ್ದು ಅವರ ಬದುಕು ಮೂರಾಬಟ್ಟೆಯಾಗಿದೆ, ಎರಡನೇ ಬಾರಿಗೆ ಇಲ್ಲಿ ಇಂತಹ ದುರ್ಘಟನೆ ನಡೆದಿದೆ, ಅಧಿಕಾರಿಗಳ ನಿರ್ಲಕ್ಷ ಮತ್ತು ರಾಜಕಾರಣಿಗಳ ಬೇಜವಾಬ್ದಾರಿ ತನದಿಂದಾಗಿ ಇಂತಹ ಘಟನೆ ಇಲ್ಲಿ ನಡೆದಿದ್ದು ಗ್ಯಾಸ್ ಸಿಲಿಂಡರ್ ಸಿಡಿದು ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ, ಒಂದು ವೇಳೆ ಹೆಚ್ಚಿನ ಅವಘಡ ನಡೆದಿದ್ದರೆ ಇದಕ್ಕೆ ಹೊಣೆ ಯಾರು? ಹೀಗಾಗಿ ಕೂಡಲೇ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿ ಕೂಡಲೇ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಿಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಚಿಂಪುಗಾನಹಳ್ಳಿ ಗ್ರಾಮದಲ್ಲಿ 10ಕ್ಕೂ ಹೆಚ್ಚಿನ ಗುಡಿಸಲಿಗೆ ಬೆಂಕಿ ಬಿದ್ದ ದಿನಬಳಕೆ ವಸ್ತುಗಳು ಸಂಪೂರ್ಣವಾಗಿ ನಾಶವಾಗಿದೆ, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅವರ ನೋವು ಆಲಿಸಿದ್ದೇನೆ, ಕಳೆದ 2 ವರ್ಷದ ಹಿಂದೆಯೂ ಇದೇ ರೀತಿ ಘಟನೆ ನಡೆದಿತ್ತು ಎಂದು ಸ್ಥಳೀಯ ನಿವಾಸಿಗಳು ನೋವನ್ನು ಹಂಚಿಕೊಂಡಿದ್ದಾರೆ, ಬಡ ಕುಟುಂಬಗಳ ಸಂಕಷ್ಟ ಗಮನಿಸಿ ತಿಂಗಳಿಗೆ ಪೂರೈಕೆ ಆಗುವಷ್ಟು ಆಹಾರ ಪದಾರ್ಥ ವಿತರಣೆ ಮಾಡಲಾಗಿದೆ, ಕೂಡಲೇ ಶಾಸಕರು ಮತ್ತು ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇವರಿಗೆ ಸೂರಿನ ವ್ಯವಸ್ಥೆ ಕಲ್ಪಿಸಬೇಕು.
ಅನಿಲ್ ಕುಮಾರ್, ಬಿಜೆಪಿ ಮುಖಂಡ, ಕೊರಟಗೆರೆ.

Get real time updates directly on you device, subscribe now.

Comments are closed.

error: Content is protected !!