ಆರೋಗ್ಯ ಸೇವೆ ಕೈಗೆಟಕುವ ದರದಲ್ಲಿ ಸಿಗಲಿ

ಆರೋಗ್ಯ ಕ್ಷೇತ್ರಕ್ಕೆ ಆರ್ಟಿಪಿಸಿಯಲ್ ಇಂಟಲಿಜೆಂಟ್ ತಂತ್ರಜ್ಞಾನ ಅಗತ್ಯ

9

Get real time updates directly on you device, subscribe now.


ತುಮಕೂರು: ಆರೋಗ್ಯ ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಆರೋಗ್ಯ ಸೇವೆ ಕೈಗೆಟಕುವ ದರದಲ್ಲಿ ಒದಗಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಆರ್ಟಿಪಿಸಿಯಲ್ ಇಂಟಲಿಜೆಂಟ್ ತಂತ್ರಜ್ಞಾನ ವ್ಯಾಪಕವಾಗಿ ಬಳಕೆ ಮಾಡುವ ಮೂಲಕ ಸವಾಲು ಮೆಟ್ಟಿ ನಿಲ್ಲಲು ಸಾಧ್ಯ ಎಂದು ಸಿಂಗಾಪುರದ ಬಯೋ ಇರ್ಫಾಮೆಟಿಕ್ ಇನ್ ಸ್ಟಿಟ್ಯೂಟ್ ನ ಪ್ರಧಾನ ವಿಜ್ಞಾನಿ ಡಾ.ಭಾನುಪ್ರಕಾಶ್ ತಿಳಿಸಿದ್ದಾರೆ.
ನಗರದ ಎಸ್ ಐ ಟಿಯ ಬಿರ್ಲಾ ಸಭಾಂಗಣದಲ್ಲಿ ಎಲೆಕ್ಟ್ರಿಕಲ್ ಸೈನ್ಸ್ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಎರಡನೇ ಸ್ಮಾರ್ಟ್ ಸಿಸ್ಟಮ್ ಫಾರ್ ಅಪ್ಲಿಕೇಷನ್ ಇನ್ ಎಲೆಕ್ಟ್ರಿಕಲ್ ಸೈನ್ಸ್- 2024 ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಈಗ ಕಾಯಿಲೆ ಗುಣಪಡಿಸುವ ಕೆಲಸ ನಡೆಯುತ್ತಿದೆ, ಆದರೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರ ಎರಡು ಒಗ್ಗೂಡಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಂಡು, ಖಾಯಿಲೆ ಬರದಂತೆ ತಡೆಯುವ ವಿಧಾನ ಸಂಶೋಧಿಸಲು ಸಾಧ್ಯ, ಇದರಿಂದ ಖಾಯಿಲೆಯ ತಪ್ಪು ಗ್ರಹಿಕೆ ಮತ್ತು ತಪ್ಪು ಚಿಕಿತ್ಸೆ ಎರಡನ್ನು ತಡೆಗಟ್ಟಬಹುದು ಎಂದರು.

ಮರಣ ಪ್ರಮಾಣ ಕಡಿಮೆ, ಅಂಗವಿಕಲತೆ ಕಡಿಮೆ ಮಾಡುವುದು ಹಾಗೂ ರೋಗ ಮುಕ್ತ ಜೀವನ ಆರೋಗ್ಯ ಕ್ಷೇತ್ರದ ಬಹುಮುಖ್ಯ ಗುರಿಗಳಾಗಿವೆ, ರೋಗ ಗುಣಪಡಿಸುವ ನಿಟ್ಟಿನಲ್ಲಿ ಔಷಧಿಗಳಿಗೆ ಗುಲಾಮರಾಗುತಿದ್ದೇವೆ, ಹಾಗಾಗಿ ರೋಗವೇ ಬರದಂತೆ ತಡೆಯುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಇಂಜಿನಿಯರಿಂಗ್ ತಂತ್ರಜ್ಞಾನ ಬಳಕೆಯಾಗ ಬೇಕಿದೆ, ಕೈಗಾರಿಕಾ ಕಾಂತ್ರಿ ಹಿಂದಿನ ನೂರು ವರ್ಷಗಳಿಗೆ ಹೊಲಿಕೆ ಮಾಡಿದರೆ ಬಹುಬೇಗ ನಡೆಯುತ್ತಿದೆ. ಬದಲಾವಣೆಗೆ ತಕ್ಕಂತೆ ನಾವುಗಳು ಬದಲಾಗಬೇಕು, ಇದು ತಂತ್ರಜ್ಞಾನದ ಅಳವಡಿಕೆಯಿಂದ ಸಾಧ್ಯ ಎಂದರು

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ವಹಿಸಿದ್ದ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ತಾಂತ್ರಿಕ ಶಿಕ್ಷಣ ಪಡೆದ ಯುವಜನರು ಮತ್ತು ಉದ್ದಿಮೆದಾರರು ತಮ್ಮಲ್ಲಿರುವ ಹೊಸ ಐಡಿಯಾಗಳನ್ನು ಹಿರಿಯರ ತಜ್ಞರ ಸಮ್ಮುಖದಲ್ಲಿ ಹಂಚಿಕೆ ಮಾಡಿಕೊಳ್ಳಲು ಸ್ಮಾರ್ಟ್ ಸಿಸ್ಟಮ್ ಫಾರ್ ಅಪ್ಲಿಕೇಷನ್ ಇನ್ ಎಲೆಕ್ಟ್ರಿಕಲ್ ಸೈನ್ಸ್- 2024 ಒಂದು ಒಳ್ಳೆಯ ವೇದಿಕೆಯಾಗಿದೆ, ಕೈಗಾರಿಕಾ ಕ್ಷೇತ್ರದ ತಜ್ಞರು ಮತ್ತು ಶೈಕ್ಷಣಿಕಾ ಕ್ಷೇತ್ರದ ತಜ್ಞರ ಜ್ಞಾನದ ವಿನಿಮಯ ವೇದಿಕೆ ಇದಾಗಿದೆ, ಜಗತ್ತಿಗೆ ಹೊಸ ಆವಿಷ್ಕಾರದ ಬಗ್ಗೆ ತಿಳುವಳಿಕೆ ಮಾಡುವುದರ ಜೊತೆಗೆ ತಮಲ್ಲಿರುವ ಇನೋವೆಟಿವ್ ಐಡಿಯಾ ಹಂಚಿಕೊಳ್ಳುವ ಅವಕಾಶವನ್ನು ಸಿದ್ದಗಂಗಾ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಮಾಡುತ್ತಾ ಬಂದಿದೆ, ಇದಕ್ಕಾಗಿ ಆಯೋಜಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಐ ಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ವಹಿಸಿದ್ದರು, ಬೆಂಗಳೂರಿನ ಇಐ ಕ್ಯುಮಿನಾ ಟೆಕ್ನಾಲಜಿಸ್ನ ಅಧ್ಯಕ್ಷರಾದ ಚೇತನಾ ಮೋಹನ್ ಅವರು ಟೆಕ್ನಿಷಿಯಂ- 2024ಗೆ ಸಂಬಂಧಿಸಿದ ಹವ್ಯಾಸಿ ಪ್ರಾಜೆಕ್ಟ್ ಪ್ರದರ್ಶನ ಉದ್ಘಾಟಿಸಿ ತಾಂತ್ರಿಕ ಭಾಷಣ ಮಾಡಿದರು, ಎಸ್ ಐ ಟಿ ಸಿಇಓ ಡಾ.ಶಿವಕುಮಾರಯ್ಯ, ಪ್ರಾಂಶುಪಾಲ ಡಾ.ಎಸ್.ವಿ.ದಿನೇಶ್, ಕೋ ಅಡಿನೇಟರ್ ಎಸ್ಐಟಿಯ ಡಾ.ಹೆಚ್.ಕೆ.ಇ.ಲತಾ, ತಾಂತ್ರಿಕ ಮುಖ್ಯಸ್ಥ ರಾದ ಡಾ.ಜಿ.ಆರ್.ಕಿರಣ್ಮಯಿ, ಸಂಯೋಜಕ ರಾದ ಡಾ.ಫನ್ವಾಲಾ ಫೆನಿಲ್ ಚೇತನ್ ಕುಮಾರ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!