ಬೆಂಕಿ ಆಕಸ್ಮಿಕ- ವಾಸದ ಗುಡಿಸಲು ಭಸ್ಮ

17

Get real time updates directly on you device, subscribe now.


ಹುಳಿಯಾರು: ಬೆಂಕಿ ಆಕಸ್ಮಿಕದಿಂದ ವಾಸದ ಗುಡಿಸಲು ಭಸ್ಮವಾಗಿ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಹುಳಿಯಾರು ಸಮೀಪದ ಕಂದಿಕೆಕೆರೆ ಗ್ರಾಪಂ ವ್ಯಾಪ್ತಿಯ ಕೊಟ್ಟಿಗೇನ ಹಳ್ಳಿ ತೋಟದ ಮನೆಯಲ್ಲಿ ಜರುಗಿದೆ.
ಭೈರಾಪುರ ಗೊಲ್ಲರಹಟ್ಟಿಯ ಕಲ್ಲೇಶಮೂರ್ತಿ ಅವರಿಗೆ ಸೇರಿದ ಗುಡಿಸಲು ಬೆಂಕಿಗೆ ಆಹುತಿಯಾಗಿದೆ, ಇವರು ತಮ್ಮ ತಂದೆ ಕೆಂಚಯ್ಯ ಅವರ ಜೊತೆ ರಾತ್ರಿ ಸೆಕೆಯಾಗಿದ್ದರಿಂದ ಗುಡಿಸಲಿನ ಹೊರಗೆ ಮಲಗಿದ್ದರು, ಮಧ್ಯರಾತ್ರಿ ಏಕಾಏಕಿ ಗುಡಿಸಲಿಗೆ ಬೆಂಕಿ ತಗುಲಿ ಹೊತ್ತಿ ಉರಿಯಲಾರಂಭಿಸಿತು, ಮನೆಯ ವಸ್ತುಗಳು ಸುಟ್ಟು ಭಸ್ಮವಾಗುತ್ತಿರುವ ಶಬ್ಧದಿಂದ ಎಚ್ಚರಗೊಂಡ ಇಬ್ಬರೂ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ತಕ್ಷಣ ಅಗ್ನಿ ಶಾಮಕ ಠಾಣೆಗೆ ವಿಷಯ ಮುಟ್ಟಿಸಿ ಅವರು ಬಂದು ನಂದಿಸುವಷ್ಟರಲ್ಲಿ ಗುಡಿಸಲಿನಲ್ಲಿದ್ದ ಬೀರು, ಮಂಚ, ಕೊಬ್ಬರಿ, ಒಂದು ಜೊತೆ ಓಲೆ, 25 ಸಾವಿರ ದುಡ್ಡು, ದಿನಸಿ, ಬಟ್ಟೆ, ಪಾತ್ರೆ ಎಲ್ಲವೂ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ, ಕಂದಿಕೆರೆ ಪಂಚಾಯ್ತಿ ಇಡಿಒ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು.

Get real time updates directly on you device, subscribe now.

Comments are closed.

error: Content is protected !!