ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿಯ ಮೇಲೆ: ಹಲ್ಲೆ

394

Get real time updates directly on you device, subscribe now.

ತುರುವೇಕೆರೆ: ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿಯ ಮೇಲೆ ಮುಷ್ಕರ ನಿರತ ಸಾರಿಗೆ ನೌಕರರು ಹಲ್ಲೆ ನೆಡೆಸಿದ ಪ್ರಕರಣ ತುರುವೇಕೆರೆ ಪಟ್ಥಣದಲ್ಲಿ ನೆಡೆದಿದೆ.
ತುರುವೇಕೆರೆ ಡಿಪೋದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವೇಗೌಡ ಹಲ್ಲೆಗೊಳಗಾದವ. ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ನಡುವೆಯೂ ಬಸವೇಗೌಡ ಕರ್ತವ್ಯಕ್ಕೆ ಹಾಜರಾಗಿದ್ದರು, ತಿಪಟೂರಿನತ್ತ ಸಾಗಲು ಬಸ್ ನಿಲ್ದಾಣದಿಂದ ಬಸ್ ಚಾಲನೆ ಮಾಡಿಕೊಂಡು ಬರುತ್ತಿದ್ದ ಸಾರಿಗೆ ಬಸ್ಸನ್ನು ಮುಷ್ಕರ ನಿರತ ಸಿಬ್ಬಂದಿ ಆಡ್ಡಗಟ್ಟಿ, ಬಸ್ ಚಾಲನೆ ಮಾಡುತ್ತಿದ್ದ ಬಸವೇಗೌಡನ ಮೇಲೆ ಮುಷ್ಕರ ನಿರತ ಸಿಬ್ಬಂದಿ ಹಲ್ಲೆ ನೆಡೆಸಿದ್ದಾರೆ. ಮತ್ತೊಂದೆಡೆ ಬಸ್ ಚಾಲನೆ ಮಾಡಿಕೊಂಡು ನಿಲ್ದಾಣ ಪ್ರವೇಶಿಸಿದ ಸಿಬ್ಬಂದಿ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ಬಸವೇಗೌಡ ಪೋಲೀಸರಿಗೆ ದೂರಿತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ವಿರುದ್ದ ಪೋಲಿಸರು ಪ್ರಕರಣ ದಾಖಲಿಸಿ, ಓರ್ವನನ್ನು ಬಂಧಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!