ದಂಡಿ ಮಾರಮ್ಮ ಜಾತ್ರೆ ರದ್ದು

217

Get real time updates directly on you device, subscribe now.

ಮಧುಗಿರಿ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿರುವ ಹಿನ್ನೆಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಯುಗಾದಿ ಹಬ್ಬದ ನಂತರ ನಡೆಯುವ ದಂಡಿಪುರ ಗ್ರಾಮದ ದಂಡಿಮಾರಮ್ಮ ಜಾತ್ರೆಯನ್ನು ರದ್ದುಪಡಿಸಲಾಗಿದೆ ಎಂದು ಉಪ ತಹಶಿಲ್ದಾರ್ ನವೀನ್ ಕುಮಾರ್ ತಿಳಿಸಿದ್ದಾರೆ.
ಜಾತ್ರೆಯ ಅಂಗವಾಗಿ ಪ್ರತಿ ವರ್ಷದಂತೆ ನಡೆಯಬೇಕಿದ್ದ ಆರತಿ, ಜಾತ್ರೆ, ನಾಟಕ ಪ್ರದರ್ಶನವನ್ನು ನಿಷೇಧಿಸಲಾಗಿದೆ, ಯುಗಾದಿ ಹಬ್ಬದ ಅಂಗವಾಗಿ ಹೆಚ್ಚು ಜನರು ಸಾರ್ವಜನಿಕ ಪ್ರದೇಶದಲ್ಲಿ ಜನಸಂದಣಿ ಇಲ್ಲದೆ ಮನೆಯಲ್ಲೇ ಹಬ್ಬ ಮತ್ತು ಪೂಜಾ ಕಾರ್ಯಗಳನ್ನು ನೆರವೇರಿಸಿಕೊಳ್ಳುವಂತೆ ಇದೇ ತಿಳಿಸಿದರು

Get real time updates directly on you device, subscribe now.

Comments are closed.

error: Content is protected !!