ಈ ಸರ್ಕಾರಿ ಶಾಲೆ ಆವರಣ ಕುಡುಕರ ಅಡ್ಡೆ…

ಅದು ಯಾವುದು ಗೊತ್ತಾ?

299

Get real time updates directly on you device, subscribe now.

ಗುಬ್ಬಿ: ತಾಲೂಕು ಕಸಬಾ ಹೋಬಳಿ ಕೆ.ಜಿ.ಟೆಂಪಲ್ ನ ನಾಗಸಂದ್ರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಬೀಗ ಮುರಿದು ಶಾಲೆಯ ಆವರಣದಲ್ಲಿ ದುಷ್ಕರ್ಮಿಗಳು ಮದ್ಯ ಸೇವಿಸಿ, ಮದ್ಯದ ಬಾಟಲ್ ಗಳನ್ನು ಎಸೆದು ಹೂವಿನ ಕುಂಡಗಳನ್ನು ಒಡೆದು ಹಾಕಿದ ಘಟನೆ ನೆನ್ನೆ ನಡೆದಿದೆ.
ಇಂದು ಅಂಬೇಡ್ಕರ್ ಜಯಂತಿ ಆಚರಣೆಗಾಗಿ ಶಾಲೆಗೆ ಬಂದ ಶಿಕ್ಷಕರು ಮತ್ತು ವಿಧ್ಯಾರ್ಥಿಗಳನ್ನು ಸ್ವಾಗತಿಸಿದ್ದು ಮದ್ಯದ ಬಾಟಲಿಗಳು, ನಾಗಸಂದ್ರ ಸರ್ಕಾರಿ ಶಾಲೆಯ ಆವರಣ ಪೋಲಿ-ಪುಂಡರ ಅನೈತಿಕ ಚಟುವಟಿಕೆಯ ತಾಣವಾಗಿದ್ದು, ಈ ರೀತಿಯ ಘಟನೆಗಳು ಪದೇಪದೇ ಮರುಕಳಿಸುತ್ತಿದೆ ಎಂದು ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಗೌಸ್ ಪೀರ್ ಆರೋಪಿಸಿದ್ದಾರೆ, ಪೊಲೀಸ್ ಇಲಾಖೆಗೆ ಬಹಳಷ್ಟು ಬಾರಿ ಮೌಕಿಕವಾಗಿ ದೂರು ನೀಡಿದ್ದರು ಏನು ಪ್ರಯೋಜನವಾಗಿಲ್ಲ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!