ಮಳೆ, ಗಾಳಿ ಅಬ್ಬರ- ಹಾರಿದ ಮನೆ ಮೇಲ್ಚಾವಣಿ

28

Get real time updates directly on you device, subscribe now.


ಕುಣಿಗಲ್: ಮಳೆಯ ನಿರೀಕ್ಷೆಯಲ್ಲಿದ್ದ ಪಟ್ಟಣ ಹಾಗೂ ಸುತ್ತಮುತ್ತಲಿನ ಜನತೆಗೆ ಬುಧವಾರ ಸಂಜೆ ಕೆಲಕಾಲ ಭರಣಿ ಮಳೆ ಭಾರಿ ಗಾಳಿಯೊಂದಿಗೆ ಬಂದ ಪರಿಣಾಮ, ಧರಣಿ ತಂಪಾಗಿ ನಾಗರಿಕರು ನೆಮ್ಮದಿ ನಿಟ್ಟುಸಿರು ಬಿಟ್ಟರು.
ಆದರೆ ಭಾರಿ ಗಾಳಿಯೊಂದಿಗೆ ಬುಧವಾರ ಸಂಜೆ ಆರಂಭವಾದ ಮಳೆಗೆ ತಾಲೂಕಿನ ನಾಗೇಗೌಡನ ಪಾಳ್ಯದ ಗಂಗಮ್ಮ ಎಂಬುವರ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ, ಆಲಪ್ಪನ ಗುಡ್ಡೆ ಸಮೀಪ ಗಾಳಿ ರಭಸಕ್ಕೆ ಮರದ ಕೊಂಬೆ ಮುರಿದು ಮುಖ್ಯ ರಸ್ತೆಗೆ ಬಿದ್ದು ಕೆಲಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

Get real time updates directly on you device, subscribe now.

Comments are closed.

error: Content is protected !!