ಅಬ್ಬರಿಸಿದ ಮಳೆ ಗಾಳಿ- ನೆಲಕಚ್ಚಿದ 400 ಬಾಳೆಗಿಡ

44

Get real time updates directly on you device, subscribe now.


ಹುಳಿಯಾರು: ಮಳೆಗಾಳಿಗೆ 400 ಬಾಳೆಗಿಡ ಧರೆಗೆ ಉರುಳಿ ಅಪಾರ ನಷ್ಟವಾಗಿರುವ ಘಟನೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ನಡೆದಿದೆ.
ಯಳನಾಡು ಗ್ರಾಮದ ವೈ.ಎಸ್.ನಾಗರಾಜು ಅವರು ಯಳನಾಡು ಸರ್ವೆ ನಂಬರ್ 104/1 ರಲ್ಲಿನ ತಮ್ಮ 2.12 ಎಕರೆ ಜಮೀನಿನಲ್ಲಿ 1.30 ಎಕರೆ ಜಮೀನಿನಲ್ಲಿ ಬೆಳೆದಿರುವ ಸುಮಾರು ಫಸಲಿಗೆ ಬಂದಿರುವ 400 ಬಾಳೆಗಿಡಗಳು ಮಳೆಗಾಳಿಗೆ ಸಂಪೂರ್ಣ ನೆಲಕ್ಕೆ ಬಿದ್ದಿದೆ.
ಘಟನಾ ಸ್ಥಳಕ್ಕೆ ಕಂದಾಯ ತನಿಖಾಧಿಕಾರಿ ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್, ಗ್ರಾಮ ಸಹಾಯಕ ಸಿದ್ದರಾಮಯ್ಯ ಅವರು ಬಂದು ಪರಿಶೀಲಿಸಿ ಸರ್ಕಾರಕ್ಕೆ ಪರಿಹಾರಕ್ಕಾಗಿ ವರದಿ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!