ಪತ್ರಕರ್ತ ರಘುಗೆ ಪಿತೃವಿಯೋಗ

26

Get real time updates directly on you device, subscribe now.


ತುಮಕೂರು: ಪತ್ರಕರ್ತ ಎ.ಎನ್.ರಘು ಅವರ ತಂದೆ ಹಾಗೂ ನಿವೃತ್ತ ಕೆಇಬಿ ನೌಕರರಾದ ನರಸಪ್ಪ (78) ಮಂಗಳವಾರ ಬೆಳಗಿನ ಜಾವ ಅರಕೆರೆಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಸುಮಾರು 35ಕ್ಕೂ ಹೆಚ್ಚು ವರ್ಷಗಳ ಕಾಲ ಕೆಇಬಿ ಲೈನ್ ಮನ್ ಆಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು ಕೆಲ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು, ಸೋಮವಾರ ತಮ್ಮ ಮನೆ ಮಂದಿಯೊಂದಿಗೆ ಚೆನ್ನಾಗಿಯೇ ಕಾಲ ಕಳೆದು, ರಾತ್ರಿ ಊಟ ಮುಗಿಸಿ ಮಲಗಿದ್ದ ನರಸಪ್ಪನವರಿಗೆ ಬೆಳಗಿನ ಜಾವ ಉಸಿರಾಟದ ತೊಂದರೆ ಕಾಣಿಸಿಕೊಂಡು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಇವರಿಗೆ ಮೂವರು ಗಂಡು ಮಕ್ಕಳು, ಓರ್ವ ಮಗಳು ಇದ್ದು, ಪತ್ನಿ ಮಕ್ಕಳು ಹಾಗೂ ಆಪಾರ ಬಂಧು ಬಳಗವನ್ನು ಅಗಲಿದ್ದಾರೆ, ಇವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಅರಕೆರೆ ಅವರ ಜಮೀನಿನಲ್ಲಿ ನೆರವೇರಿತು.

Get real time updates directly on you device, subscribe now.

Comments are closed.

error: Content is protected !!