ವ್ಯಕ್ತಿ ಮೇಲೆ ಹಲ್ಲೆ- ದೂರು ದಾಖಲು

30

Get real time updates directly on you device, subscribe now.


ಕುಣಿಗಲ್: ಬೈಕಿನಲ್ಲಿ ಬರುತ್ತಿದ್ದ ವ್ಯಕಿಯೊಬ್ಬನನ್ನು ಕಾರಿನಲ್ಲಿ ಅಪಹರಿಸಿದ ಗುಂಪು ಮಾರಾಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದವ ತಪ್ಪಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲಾಗಿ ಹಲ್ಲೆಕೋರರ ಮೇಲೆ ದೂರು ನೀಡಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದವನನ್ನು ಕುಣಿಗಲ್ ತಾಲೂಕಿನ ಅಂಚೆಪಾಳ್ಯ ವಾಸಿ ಮಂಜುನಾಥ ಅ. ಕೆಂಚಣ್ಣ ಎಂದು ಗುರುತಿಸಲಾಗಿದೆ, ಈತ ಭಾನುವಾರ ರಾತ್ರಿ ಅಂಚೆಪಾಳ್ಯದಿಂದ ಕುಣಿಗಲ್ ಪಟ್ಟಣಕ್ಕೆ ಬರುವಾಗ ಅಂಚೆಪಾಳ್ಯ ಫ್ಲೈ ಓವರ್ ಕೆಳಗೆ ಕಾರಿನಲ್ಲಿ ಗೋವಿಂದ, ಅಕ್ಷಯ, ಲಕ್ಷ್ಮಣ ಸೇರಿ ಇತರೆ ಐದಕ್ಕೂ ಹೆಚ್ಚು ಮಂದಿಯ ಗುಂಪು ಮಂಜುನಾಥನನ್ನು ಅಡ್ಡಹಾಕಿ ಅಪಹರಿಸಿ, ಮಾಗಡಿ ತಾಲೂಕು ಕಲ್ಯ ಗ್ರಾಮಕ್ಕೆ ಕರೆದೊಯ್ದು ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದು, ಹಲ್ಲೆಕೋರರ ಗುಂಪಿನಿಂದ ತಪ್ಪಿಸಿಕೊಂಡ ಮಂಜುನಾಥ ಆಸ್ಪತ್ರೆಗೆ ದಾಖಲಾಗಿ ಕುಣಿಗಲ್ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಲಕ್ಷ್ಮಣ ಎಂಬಾತನನ್ನು ಬಂಧಿಸಿದ್ದು, ಗೋವಿಂದ ಎಂಬಾತ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಎಂದು ಹೇಳಲಾಗಿದೆ.

Get real time updates directly on you device, subscribe now.

Comments are closed.

error: Content is protected !!