ಸಿಲಿಂಡರ್ ಸ್ಪೋಟ- ಚಿಕಿತ್ಸೆ ಫಲಿಸದೆ ಇಬ್ಬರು ಸಾವು

33

Get real time updates directly on you device, subscribe now.


ಕುಣಿಗಲ್: ಕಳೆದ ಭಾನುವಾರ ಸಂಜೆ ಪಟ್ಟಣದ ಕೋಟೆ ಪ್ರದೇಶದ ಸಿಂಗ್ ಬೀದಿಯ ನಟರಾಜ್ ಎಂಬುವರಿಗೆ ಸೇರಿದ ಮನೆಯಲ್ಲಿ ಸಿಲೆಂಡರ್ ಸ್ಪೋಟಗೊಂಡು ಆರು ಮಂದಿ ಸುಟ್ಟಗಾಯಗಳಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಮೃತ ಪಟ್ಟವರನ್ನು ಕುಶಾಲ್ (11) ಹಾಗೂ ಶಿವಣ್ಣ ಅ. ಹನುಮಂತ (45) ಎಂದು ಗುರುತಿಸಲಾಗಿದೆ, ಭಾನುವಾರ ಸಂಜೆ ಸಿಲೆಂಡರ್ ಸ್ಪೋಟಗೊಂಡು, ಬೆಂಕಿ ಆವರಿಸಿಕೊಂಡಿದ್ದು ಬೆಂಕಿ ನಂದಿಸಲು ಶಿವಣ್ಣ ಸೇರಿದಂತೆ ಇತರೆ ನಾಲ್ವರು ಯತ್ನಿಸಿದ್ದರು, ಈ ಘಟನೆಯಲ್ಲಿ ಸುಟ್ಟು ಗಾಯಗಳಾಗಿದ್ದು ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ, ಶಿವಣ್ಣ ಮೂಲತಃ ತಾಲೂಕಿನ ಜಿಡ್ಡಿಗೆರೆ ಗ್ರಾಮದವರಾಗಿದ್ದು ಪಟ್ಟಣದಲ್ಲಿ ಮನೆ ಮಾಡಿಕೊಂಡು ಸೊಪ್ಪು, ತರಕಾರಿ ಮಾರಾಟ ಮಾಡುತ್ತಿದ್ದರು, ಕುಶಾಲ್ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಘಟನೆ ನಡೆದ ವೇಳೆ ಮನೆಯಿಂದ ಹೊರ ಬರುತ್ತಿದ್ದರು, ಸಿಲಿಂಡರ್ ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

Get real time updates directly on you device, subscribe now.

Comments are closed.

error: Content is protected !!