ದಾರಿ ಕೇಳಿದ ಸೈನಿಕನ ಮೇಲೆ ಹಲ್ಲೆ

29

Get real time updates directly on you device, subscribe now.


ಕೊರಟಗೆರೆ: ಯೋಧನೋರ್ವ ತನ್ನ ಮನೆಗೆ ತೆರಳಲು ದಾರಿ ಕೇಳಿದ್ದಕ್ಕೆ ಸಿಟ್ಟಿಗೆದ್ದ 5 ಜನ ಪುಡಿರೌಡಿಗಳ ತಂಡವೊಂದು ಬಿಯರ್ ಬಾಟಲಿನಿಂದ ಯೋಧನಿಗೆ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಕೆಲದಿನಗಳ ಹಿಂದೆ ಬೈರೇನಹಳ್ಳಿಯ ಎನ್ ಟಿ ಆರ್ ಕಂಫರ್ಟ್ ಮತ್ತು ರೆಸ್ಟೋರೆಂಟ್ ನಲ್ಲಿ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿಯ ಎನ್ ಟಿ ಆರ್ ಕಂಫರ್ಟ್ ಮತ್ತು ಬಾರ್ ರೆಸ್ಟೋರೆಂಟ್ ನಲ್ಲಿ ಘಟನೆ ನಡೆದಿದೆ, ರಾಯವಾರದ ಯೋಧ ಗೋವಿಂದರಾಜು (30) ತಲೆ ಮತ್ತು ಕೈ ಕಾಲುಗಳಿಗೆ ತೀವ್ರತರದ ಗಾಯಗಳಾಗಿ ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಜಮ್ಮು ಕಾಶ್ಮೀರದ ಭಾರತೀಯ ಭೂಸೇನೆ ಸಿಪಾಯಿಯಾಗಿ ಜಮ್ಮು ಕಾಶ್ಮಿರದ ರಜೌರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಯವಾರದ ಯೋಧ ಗೋವಿಂದರಾಜು ರಜೆಯ ಪ್ರಯುಕ್ತ ತನ್ನ ಸ್ವಗ್ರಾಮಕ್ಕೆ ಆಗಮಿಸಿದ್ದಾನೆ, ಮದ್ಯಪಾನ ಮಾಡಿ ಮನೆಗೆ ಹಿಂದಿರುಗುವಾಗ ಯುವಕರ ಗುಂಪು ಹಲ್ಲೆ ನಡೆಸಿದೆ.
ಕೊಲೆ ಯತ್ನ: ಅಣ್ಣ ದಾರಿ ಬೀಡಿ ನಾನು ಮನೆಗೆ ಹೋಗಬೇಕಿದೆ, ರಸ್ತೆಗೆ ಅಡ್ಡಲಾಗಿ ನಿಂತಿದ್ದ ಯುವಕರಲ್ಲಿ ಯೋಧ ಮನವಿ ಮಾಡಿದ್ದಾನೆ, ಯೋಧನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ನಮ್ಮನ್ನೇ ಪ್ರಶ್ನೆ ಮಾಡ್ತಿಯಾ ಎಂದು ಬಿಯರ್ ಬಾಟಲ್ ನಿಂದ ತಲೆಗೆ ಹೊಡೆದ ಪುನಿತ ತನ್ನ ಸ್ನೇಹಿತರ ಜೊತೆ ಸೇರಿ ಯೋಧನ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ರಾಯವಾರದ ಯೋಧ ಗೋವಿಂದರಾಜು ದೂರಿನ ಅನ್ವಯ ಮಧುಗಿರಿಯ ಕೊಡಗದಾಲದ ಪುನಿತ (37), ಹುಣಸವಾಡಿಯ ಗೌರಿಶಂಕರ (37), ಶಿವಾ (37), ಕೊರಟಗೆರೆಯ ಅರಸಾಪುರದ ಭರತ್(29), ಕೊಡಿಗೇನಹಳ್ಳಿ ಸಮೀಪದ ಭಟ್ಟಗೆರೆಯ ದಿಲೀಪ್(35) ಎಂಬಾತನ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿ 10 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!