ಚಿರತೆ ದಾಳಿ ನಾಲ್ಕು ಕುರಿ ಸಾವು

45

Get real time updates directly on you device, subscribe now.


ಕೊಡಿಗೇನಹಳ್ಳಿ: ತಾಲ್ಲೂಕಿನ ಚಿಕ್ಕದಾಳವಟ್ಟ ಗ್ರಾಪಂ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ನಾಲ್ಕು ಕುರಿಗಳನ್ನು ಕೊಂದಿರುವ ಘಟನೆ ನಡೆದಿದೆ.
ಗ್ರಾಮದ ಕುರಿಗಾಹಿ ನರಸಯ್ಯ ತಮ್ಮ ಕುರಿಗಳನ್ನು ಗ್ರಾಮದಾಚೆಯ ಕುರಿ ರೊಪ್ಪದಲ್ಲಿ ಬಿಟ್ಟಿದ್ದಾಗ ಚಿರತೆ ದಾಳಿ ಮಾಡಿದೆ, ಕಳೆದ ಇಪ್ಪತ್ತು ದಿನಗಳ ಹಿಂದೆಯಷ್ಟೇ ಚಿರತೆ ಎರಡು ನಾಯಿಗಳನ್ನು ಹೊತ್ತು ಹೋಗಿ ತಿಂದಿತ್ತು, ನರಸಪ್ಪ ಎಂಬುವವರಿಗೆ 40 ಕುರಿಗಳ ಮೇಲೆ ದಾಳಿ ಮಾಡಿದ್ದು 4 ಕುರಿ ಸಾವನ್ನಪ್ಪಿವೆ, ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಜಗದೀಶ್ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಮಾಡಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ, ಹೊಸ ಇಟಕಲೋಟಿ ಅರಣ್ಯದ ಸುತ್ತಮುತ್ತ ಚಿರತೆ ಕಂಡು ಬರುತ್ತಿದ್ದು ಅರಣ್ಯ ಇಲಾಖೆ ಬೋನಿಟ್ಟು ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!