ಟ್ರ್ಯಾಕ್ಟರ್ ಡಿಕ್ಕಿ- ಓರ್ವನ ಕಾಲುಮುರಿತ

40

Get real time updates directly on you device, subscribe now.


ಕೊಡಿಗೇನಹಳ್ಳಿ: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಟ್ರ್ಯಾಕ್ಟರ್ ಚಾಲುಕನ ಅಜಾಗರುಕತೆಯಿಂದ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಅಣ್ಣೇನಹಳ್ಳಿ ಗೇಟ್ ಬಳಿ ಘಟನೆ ಜರುಗಿದೆ, ಮುದ್ದೇನಹಳ್ಳಿ ಯುವಕ ರಾಜಶೇಖರ ರೆಡ್ಡಿ ಹಾಗೂ ದೊಡ್ದದಾಳವಟ್ಟ ಹೇಮಂತ್ ಕುಮಾರ್ ಎಂಬುವವರು ದ್ವಿಚಕ್ರ ವಾಹನದಲ್ಲಿ ಡಿಪ್ಲೋಮಾ ಪರೀಕ್ಷೆ ಬರೆಯಲು ತೆರಳುತ್ತಿದ್ದಾಗ ಡಾಕ್ಟರ್ ಚಾಲಕನ ಅಜಾಗರುಕತೆ ಹಾಗೂ ವೇಗವಾಗಿ ವಾಹನ ಚಲಾಯಿಸಿದ ಪರಿಣಾಮ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ.
ದ್ವಿಚಕ್ರ ವಾಹನದಲಿದ್ದ ಮುದ್ದೇನಹಳ್ಳಿ ಯುವಕ ರಾಜಶೇಖರ ರೆಡ್ಡಿ (18) ತಲೆಗೆ ತೀವ್ರ ಪೆಟ್ಟಾಗಿದ್ದು ಕಣ್ಣಿನ ಬಳಿ ಗಂಭೀರ ಗಾಯಗಳಾಗಿವೆ.
ದೊಡ್ದದಾಳವಟ್ಟ ಹೇಮಂತ್ ಕುಮಾರ್ (18) ಎಂಬಾತನಿಗೆ ಒಂದು ಮುರಿದಿದ್ದು ಮತ್ತೊಂದು ಕಾಲಿಗೆ ಗಂಭೀರ ಪೆಟ್ಟಾಗಿದೆ.

ಸ್ಥಳದಲ್ಲಿದ್ದ ಬಿಎಸ್ಪಿ ಜಿಲ್ಲಾ ಉಸ್ತುವಾರಿ ಅಣ್ಣೆನಹಳ್ಳಿ ಗೋಪಾಲ್ ಗಾಯಾಳುಗಳನ್ನು ರಕ್ಷಿಸಿ 108 ವಾಹನಕ್ಕೆ ಕರೆ ಮಾಡಿ ಮುದ್ದೇನಹಳ್ಳಿ ಗ್ರಾಮಸ್ಥರಿಗೆ ಸುದ್ದಿ ತಿಳಿಸಿದ್ದು ಮುದ್ದೇನಹಳ್ಳಿ ಶ್ಯಾಮ ಸುಂದರ್ ರೆಡ್ಡಿ ಎಂಬುವರು ಗಾಯಾಳುಗಳನ್ನು ಹಿಂದೂಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಗಡಿ ಭಾಗದಲ್ಲಿ ಸಾಲು ಸಾಲು ಮದ್ಯದ ಅಂಗಡಿಗಳು ತಲೆ ಎತ್ತಿದ್ದು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಪ್ರಕರಣ ಹೆಚ್ಚಾಗಿದ್ದು ಸಿಸಿ ಟಿವಿ ಅಳವಡಿಸುವಂತೆ ಸುಮಾರು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ, ತುರ್ತು ಸೇವೆಗೆ 108 ಸೇವೆ ಸಿಗುತ್ತಿಲ್ಲ ಎಂದು ಬಿಎಸ್ಪಿ ಜಿಲ್ಲಾ ಉಸ್ತುವಾರಿ ಅಣ್ಣೆನಹಳ್ಳಿ ಗೋಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!