ಹೆಂಡತಿಯನ್ನು ಭೀಕರವಾಗಿ ಕೊಂದ ಗಂಡ

ರುಂಡ, ಮುಂಡ ತುಂಡರಿಸಿ ಕ್ರೌರ್ಯ ಮೆರೆದ ಪತಿರಾಯ

29

Get real time updates directly on you device, subscribe now.


ಕುಣಿಗಲ್: ತಾಲೂಕಿನಲ್ಲಿ ಹಿಂದೆಂದೂ ಕಂಡಿರಿದಂತಹ ಅಪರಾಧಿಕ ಕೃತ್ಯ ಮಂಗಳವಾರ ತಾಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಯೂರು ದುರ್ಗದಲ್ಲಿ ನಡೆದಿದ್ದು, ಪತಿ ಪತ್ನಿಯ ಕತ್ತು ಕತ್ತರಿಸಿ, ದೇಹ ತುಂಡರಿಸಿ, ಚರ್ಮ ಸುಲಿದಿರುವ ಧಾರುಣ ಭೀಭತ್ಸ ಘಟನೆ ನಡೆದಿದೆ.
ಧಾರುಣವಾಗಿ ಕೊಲೆಯಾದವಳನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ (38) ಎಂದು ಗುರುತಿಸಲಾಗಿದೆ, ಈಕೆ ಕೆಲ ವರ್ಷದ ಹಿಂದೆ ಸುಗ್ಗನಹಳ್ಳಿಯ ಶಿವರಾಮ್ (45) ಎಂಬಾತನೊಂದಿಗೆ ಮದುವೆಯಾಗಿದ್ದು ಎಂಟು ವರ್ಷದ ಗಂಡು ಮಗುವಿದೆ.

ಕಳೆದ ಕೆಲ ತಿಂಗಳ ಹಿಂದೆ ದಂಪತಿ ಹುಲಿಯೂರು ದುರ್ಗದ ಹೊಸಪೇಟೆಯ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು, ಪುಷ್ಪ ಕೆಲ ಮನೆಗಳಲ್ಲಿ ಮೆನ ಕೆಲಸ ಮಾಡುತ್ತಿದ್ದರೆ, ಪತಿ ಶಿವರಾಮ್ ಸ್ಥಳೀಯ ಸಾಮಿಲ್ ನಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ, ದಿನಾಲೂ ಪತಿ, ಪತ್ನಿ ನಡುವೆ ಜಗಳ ನಡೆಯುತ್ತಿತ್ತು, ಸೋಮವಾರ ರಾತ್ರಿ ಸಹ ಜಗಳ ನಡೆದಿತ್ತು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಪತಿಯೆ ಸಾಮಿಲ್ ಮಾಲೀಕರಿಗೆ ತಾನು ನಡೆಸಿದ ಕೃತ್ಯದ ಮಾಹಿತಿ ನೀಡಿದ ಮೇರೆಗೆ ಮಾಲೀಕ ಪೊಲೀಸರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ದೃಶ್ಯ ಕಂಡು ಹೌಹಾರಿದ್ದಾರೆ, ತಲೆ ಕತ್ತರಿಸಿ, ದೇಹವನ್ನು ತುಂಡು ತುಂಡು ಮಾಡಿ ನಂತರ ಚರ್ಮ ಸುಲಿದಿದ್ದು ಘಟನೆ ಸ್ಥಳ ಭೀಭತ್ಸ ದೃಶ್ಯಕ್ಕೆ ಸಾಕ್ಷಿಯಾಗಿತ್ತು.

ಸಿಪಿಐ ಎಂ.ನಾಯಕ್, ಡಿವೈಎಸ್ಪಿ ಓಂಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ, ಘಟನೆ ನಡೆದಾಗ ಮಗ ನಿದ್ದೆಗೆ ಜಾರಿದ್ದ ಎನ್ನಲಾಗಿದೆ, ಘಟನೆಗೆ ಸಂಬಂಧಿಸಿದಂತೆ ಪುಷ್ಪಳ ಸಂಬಂಧಿ ಶಿವಶಂಕರ್ ನೀಡಿದ ದೂರಿನ ಮೇರೆಗೆ ಹುಲಿಯೂರು ದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ, ತಲೆ ಕತ್ತರಿಸಿ,ದೇಹ ತುಂಡರಿಸಿ ಚರ್ಮ ಸುಲಿದಿರುವ ಘಟನೆ ಹುಲಿಯೂರು ದುರ್ಗ ಜನತೆಯನ್ನೆ ಬೆಚ್ಚಿ ಬೀಳಿಸಿದೆ, ಕೌಟುಂಬಿಕ ಕಲಹವೆ ಘಟನೆ ಕಾರಣ ಎಂದು ಶಂಕಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!