ಮನೆ ಬೀಗ ಹೊಡೆದು ಚಿನ್ನ, ನಗದು ಕಳ್ಳತನ

40

Get real time updates directly on you device, subscribe now.


ಕೊರಟಗೆರೆ: ಪತ್ರಕರ್ತರ ಕುಟುಂಬ ಊರಿನಲ್ಲಿ ಇಲ್ಲದಿದ್ದಾಗ ಮನೆ ಬೀಗ ಹೊಡೆದು 30 ಗ್ರಾಂ ಚಿನ್ನಾಭರಣ, 25 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ದೊಡ್ಡಪೇಟೆ ಬಡವಾವಣೆಯ ದೇವರಾಜ್ ಹಾಗೂ ಆತನ ಸಹೋದರಿ ಶಶಿಕಲಾ ಎಂಬುವರ ಮನೆಯಲ್ಲಿಯಾರು ಇಲ್ಲದಿರುವುದನ್ನು ಮನಗಂಡ ಕಳ್ಳರು ಬೀಗ ಹೊಡೆದು ಮನೆಯಲ್ಲಿನ ಬೀರು ಲಾಕರ್ ಹೊಡೆದು ಅದರಲ್ಲಿ ಇಟ್ಟಿದ್ದ 30 ಗ್ರಾಂ ಚಿನ್ನಾಭರಣ ಹಾಗೂ 25 ಸಾವಿರ ನಗದು ಹಣ ಕಳ್ಳತನವಾಗಿದೆ ಎನ್ನಲಾಗಿದೆ.
ಕಳ್ಳರು ಮೆನಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಪಕ್ಕದ ಮನೆಯವರು ಹೊರಗೆ ಬಂದು ಕಳ್ಳರನ್ನು ಸೆರೆ ಹಿಡಿಯಲು ಪ್ರಯತ್ನ ಪಡುವ ಸಂದರ್ಭದಲ್ಲಿ ಕಳ್ಳರು ಪರಾರಿಯಾಗಿದ್ದಾರೆ, ವಿಚಾರ ತಿಳಿದ ತಕ್ಷಣ ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ, ಬೆರಳಚ್ಚು ತಂಡ ಹಾಗೂ ಶ್ವಾನದಳ ತಪಾಸಣೆ ನಡೆಸಿದ್ದಾರೆ.

ಬೆಳಗಿನ ಜಾವ 3.30 ಗಂಟೆ ಸಮಯದಲ್ಲಿ ಕಳ್ಳತನವಾಗಿದ್ದು, ಪಕ್ಕದ ಮನೆಯವರು ಕಳ್ಳತನದ ವಿಚಾರ ತಿಳಿದು ನಮಗೆ ಕರೆ ಮಾಡಿದ್ದಾರೆ, ನಾವು ಬಂದು ಸ್ಥಳ ಪರಿಶೀಲನೆ ನಡೆಸಲಾಗಿ ಕಳ್ಳತನವಾಗಿರುವುದು ಕಂಡುಬಂದು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದೇವೆ, ತಕ್ಷಣವೇ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ, ಆದಷ್ಟು ಬೇಗ ತನಿಖೆ ನಡೆಸಿ ಹುಡುಕಿಸಿ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಎಂದು ಮನೆ ಮಾಲೀಕ, ಪರ್ತಕರ್ತ ದೇವರಾಜು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!