ಸಿಡಿಲಿಗೆ ಗೋದಾಮು ಭಸ್ಮ

33

Get real time updates directly on you device, subscribe now.


ಮಧುಗಿರಿ: ಸಿಡಿಲು ಬಡಿದ ಪರಿಣಾಮ ಆಟೋಮೊಬೈಲ್ ಸಂಬಂಧಿಸಿದ ಗೋದಾಮು ಸಂಪೂರ್ಣ ಭಸ್ಮವಾಗಿರುವ ಘಟನೆ ಪಟ್ಟಣದ ಎಸಿ ಆಫೀಸ್ ಮುಂಭಾಗದಲ್ಲಿರುವ ಎಸ್ ಕೆ ವರ್ಕ್ ಷಾಪ್ ಹಿಂಭಾಗ ನಡೆದಿದೆ.
ಪಟ್ಟಣದಲ್ಲಿ ಗುಡುಗು, ಮಿಂಚು ಮತ್ತು ಸಿಡಿಲಿನಿಂದ ಮಳೆ ಸುರಿದಿದೆ, ಈ ವೇಳೆ ಎಸಿ ಕಚೇರಿ ಮುಂಭಾಗದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದಿದ್ದು ನಂತರ ಸಮೀಪದಲ್ಲಿರುವ ಆಟೋಮೊಬೈಲ್ ಗೋದಾಮು ತಲುಪಿದೆ, ಇದರಿಂದಾಗಿ ಕಟ್ಟಡದ ಗೋಡೆಗಳು ಸಹ ಬಿರುಕಾಗಿದೆ.
ಇದು ಟಿ.ರಂಗಣ್ಣ ಎಂಬುವರಿಗೆ ಸೇರಿದ ಆಟೋ ಮೊಬೈಲ್ ಗೋಡಮಾಗಿದೆ, ಎಸ್ ಕೆ ವರ್ಕ್ ಶಾಪ್ ನವರು ಬಾಗಿಲು ತೆಗೆದಾಗ ಬೆಂಕಿಯ ಹೊಗೆ ಕಾಣಿಸಿಕೊಂಡಿದೆ, ನಂತರ ಹಿಂಭಾಗದಲ್ಲಿರುವ ಗೋಡನ್ನಿಂದ ಹೊಗೆ ಉರಿಯುತ್ತಿದ್ದು ಬೆಂಕಿಯ ಶಾಖಕ್ಕೆ ಹಿಂದುರಿಗಿದ್ದಾರೆ, ನಂತರ ಸಮೀಪದಲ್ಲಿ ಇದ್ದ ಪುರಸಭಾ ಸದಸ್ಯ ಅಲಿಂಮೂಲ್ಲಾ ಅವರು ತಕ್ಷಣವೇ ಅಗ್ನಿಶಾಮಕ ದಳದವರಿಗೆ ದೂರವಾಣಿ ಕರೆ ಮಾಡಿದ್ದಾರೆ, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಲೀಕ ಟಿ.ರಂಗಣ್ಣ ಮಾತನಾಡಿ, ಸುಮಾರು 8 ಲಕ್ಷ ರೂ. ಮೌಲ್ಯದ ಆಟೋಮೊಬೈಲ್ ವಸ್ತುಗಳು ನಾಶವಾಗಿದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!