ಗೃಹಿಣಿ ಸಾವು ಟ್ವಿಸ್ಟ್ ಪಡೆಯುತ್ತಾ..

549

Get real time updates directly on you device, subscribe now.

ತುರುವೇಕೆರೆ: ಪಟ್ಟಣದ ಕೆರೆಕೋಡಿ ಪ್ರದೇಶದಲ್ಲಿ ವಾಸವಾಗಿದ್ದ ಗೃಹಿಣಿ ಅನುಮಾನಸ್ಪದವಾಗಿ ಸಾವನ್ನಪಿರುವ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ದುರ್ದೈವಿ ಆಶಾ (24) ತಾಲೂಕಿನ ಸಂಪಿಗೆ ಗ್ರಾಮದ ಶ್ರೀನಿವಾಸ್ ಎಂಬುವರ ಮೊದಲ ಪುತ್ರಿಯಾಗಿದ್ದಾಳೆ.
ಈಕೆಯನ್ನು ಕೆರೆಕೋಡಿ ನಿವಾಸಿ ಪುಟ್ಟರಾಜು ಎಂಬುವರಿಗೆ 2015 ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಆಗಾಗ್ಗೆ ಗಂಡ ಹೆಂಡತಿ ನಡುವೆ ಕದನ ಏರ್ಪಟ್ಟಿತ್ತು ಎನ್ನಲಾಗಿದೆ. ಮೃತ ಆಶಾ ತಂದೆ ಶ್ರೀನಿವಾಸ್ ಅಳಿಯನಿಗೆ ಸಾಕಷ್ಟು ಬಾರಿ ತಿಳುವಳಿಕೆ ಹೇಳಿದ್ದರು ಎನ್ನಲಾಗಿದೆ. ಕಳೆದ ರಾತ್ರಿ ಆಶಾಗೆ ಲೋ ಬಿಪಿ ಸಮಸ್ಯೆ ಉಂಟಾಗಿ ಮೃತಪಟ್ಟಿದ್ದಾಳೆ ಎಂಬ ಸುದ್ದಿ ಆಶಾಳ ತಂದೆಗೆ ತಲುಪಿದೆ. ತಕ್ಷಣ ಆಸ್ಪತ್ರೆಗೆ ಆಗಮಿಸಿದ ಶ್ರೀನಿವಾಸ್ ಮತ್ತು ಕುಟುಂಬದವರು ಆಶಾಳ ಕುತ್ತಿಗೆಯ ಸುತ್ತ ಇದ್ದ ಕಪ್ಪು ಕಲೆಯನ್ನು ಗಮನಿಸಿದ್ದಾರೆ. ಆಶಾಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ತಂದೆ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ತುರುವೇಕೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

Get real time updates directly on you device, subscribe now.

Comments are closed.

error: Content is protected !!