ಯಡಿಯೂರು ಕ್ಷೇತ್ರದ ಆನೆ ಗಂಗಾ ಸಾವು

46

Get real time updates directly on you device, subscribe now.


ಕುಣಿಗಲ್: ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರದ ಆನೆ ಗಂಗಾ ಮೃತಪಟ್ಟಿದೆ.
ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಕಳೆದ 30 ವರ್ಷಗಳಿಂದ ಶ್ರೀಸ್ವಾಮಿಯ ವಿವಿಧ ಸೇವೆಯಲ್ಲಿ ಪಾಲ್ಗೊಂಡು ಕ್ಷೇತ್ರಕ್ಕೆ ಬರುವ ಜನರ, ಭಕ್ತರ ಆಕರ್ಷಣೆಯಾಗಿತ್ತು, ಕಳೆದ ಕೆಲ ತಿಂಗಳ ಹಿಂದೆ ತೀವ್ರ ಅನಾರೋಗ್ಯಗೊಂಡು ತಜ್ಞರ ಸೂಚನೆ ಮೇರೆಗೆ ಕೋಲಾರದಲ್ಲಿರುವ ಆನೆ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗೆ ಕಳಿಸಲಾಗಿದ್ದ ಶ್ರೀಕ್ಷೇತ್ರದ ಆನೆ ಗಂಗಾ (70) ಕೇಂದ್ರದಲ್ಲಿ ಮಂಗಳವಾರ ಮೃತಪಟ್ಟಿದೆ.
ಸುಮಾರು ಮೂವತ್ತು ವರ್ಷದ ಹಿಂದೆ ಶ್ರೀಕ್ಷೇತ್ರಕ್ಕೆ ಆನೆಯನ್ನು ದಾನಿಗಳು ನೀಡಿದ್ದರು, ಶ್ರೀ ಕ್ಷೇತ್ರದ ಜನರ ಭಾವನೆಯೊಂದಿಗೆ ಬೆರೆತಿದ್ದ ಆನೆ ಮೃತಪಟ್ಟ ಸುದ್ದಿ ಯಡಿಯೂರಿನ ಜನರಲ್ಲಿ ತೀವ್ರ ಆಘಾತ ಉಂಟು ಮಾಡಿದೆ, ಮೃತ ಆನೆಯ ಅಂತ್ಯಕ್ರಿಯೆ ಕ್ಷೇತ್ರದಲ್ಲಿ ನಿರ್ವಹಿಸಿ, ಸ್ಮಾರಕ ನಿರ್ಮಿಸುವಂತೆ ದೇವಾಲಯ ಆಡಳಿತ ಸೇರಿದಂತೆ ಜಿಲ್ಲಾಡಳಿತಕ್ಕೆ ಯಡಿಯೂರಿನ ನಾಗರಿಕರು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!