ಜೂಜುಕೋರರ ಬಂಧನ

279

Get real time updates directly on you device, subscribe now.

ಕೊರಟಗೆರೆ: ಯುಗಾದಿ ಹಬ್ಬದ ಪ್ರಯುಕ್ತ ಪ್ರತ್ಯೇಕ ಮೂರು ಕಡೆಗಳಲ್ಲಿ ಖಚಿತ ಮಾಹಿತಿ ಆಧರಿಸಿ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿರುವ ಸಿಪಿಐ ಸಿದ್ದರಾಮೇಶ್ವರ ಮತ್ತು ಪಿಎಸೈ ಮುತ್ತುರಾಜು ನೇತೃತ್ವದ ಪೊಲೀಸರ ತಂಡ 14 ಜನ ಆರೋಪಿಗಳ ಜೊತೆ 40950 ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.
ಕೊರಟಗೆರೆ ತಾಲೂಕಿನ ಕಲ್ಲುಗುಟ್ಟರಹಳ್ಳಿ ಗ್ರಾಮದ 4 ಜನ ಆರೋಪಿ, 28150 ನಗದು, ಬೋಡಬಂಡೇನಹಳ್ಳಿ ಗ್ರಾಮದ 6 ಜನ ಆರೋಪಿ, 11700 ರೂ. ನಗದು ಮತ್ತು ಕತ್ತಿನಾಗೇನಹಳ್ಳಿ ಗ್ರಾಮದ 4 ಜನ ಆರೋಪಿಗಳ ಜೊತೆ 1100 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಸ್ಪೀಟ್ ದಾಳಿಯ ವೇಳೆ ಪೊಲೀಸ್ ಇಲಾಖೆಯ ಸದಾನಂದ, ನಾಗರಾಜು, ಗೋವಿಂದನಾಯ್ಕ, ರಂಗನಾಥ, ಶಂಕರಪ್ಪ, ಕಿರಣ್, ಪ್ರಕಾಶ್ ಭಾಗವಹಿಸಿದ್ದರು. ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ 14 ಜನ ಆರೋಪಿಗಳ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!