ಕೆನಾಲ್ ವಿಚಾರದಲ್ಲಿ ಲಾಠಿಗೆ ಹೆದರುವುದಿಲ್ಲ

18

Get real time updates directly on you device, subscribe now.


ತುರುವೇಕೆರೆ: ರಾಮನಗರ ಎಕ್ಸ್ ಪ್ರಸ್ ಲಿಂಕ್ ಕೆನಾಲ್ ಮಾಡಲು ಸರ್ಕಾರ ಹಠಕ್ಕೆ ಬಿದ್ದಿದ್ದು ಪೊಲೀಸರನ್ನು ಬಳಸಿ ಕೆಲಸ ಮಾಡುವುದು ಸಂವಿಧಾನ, ಜನ ವಿರೋಧಿಯಾಗಿದೆ, ಸರ್ಕಾರದ ಲಾಠಿಗೆ ನಾವು ಹೆದರುವುದಿಲ್ಲ, ನಾವು ಸಹ ಯಡೆಮಟ್ಟೆ ಸೇವೆ ಮಾಡುತ್ತೇವೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರವನ್ನು ಎಚ್ಚರಸಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮನಗರ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಮಾಡದಂತೆ ಸುಮಾರು ಹೋರಾಟ ಮಾಡಿದ್ದೇನೆ, ನಾವೇ ಖುದ್ದು ಹೋಗಿ ಪೈಪ್ ಗಳನ್ನು ಹಿಂದಕ್ಕೆ ಕಳಿಸಿ ಕಾಮಗಾರಿ ನಿಲ್ಲಿಸಿ ಬಂದಿದ್ದೇವೆ, ಆದರೂ ಸಹ ಹೇಮಾವತಿ ಎಇಇ ಕಾಮಗಾರಿ ಪ್ರಾರಂಬಿಸಲು ಪೊಲೀಸ್ ಭದ್ರತೆ ಕೋರಿದ್ದಾರೆ, ಯಾವುದೇ ಸರ್ಕಾರ ಎಲ್ಲಾ ಜನರ ಹಿತದೃಷ್ಟಿಯಿಂದ ಕಾರ್ಯಕ್ರಮ ಜಾರಿ ಮಾಡಬೇಕು, ಇಡೀ ಜಿಲ್ಲೆ ವಿರೋಧ ಮಾಡುವಾಗ ಒಬ್ಬ ಹೇಮಾವತಿ ಎಇಇ ಮಾಡುತ್ತೇವೆ ಎಂದರೆ ಸರ್ಕಾರದ ಆಡಳಿತದ ನಾಚಿಗೇಡಿ ತನವಾಗಿದೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಮುನಿಯೂರು ರಂಗಸ್ವಾಮಿ, ಶಿವಾನಂದ್, ಪರಮಶಿವಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!