ಅಡ್ವಾಣಿಗೆ ಸಂತಾಪ- ಸಮಾರಂಭದಲ್ಲಿ ಅಧ್ವಾನ

18

Get real time updates directly on you device, subscribe now.


ಕುಣಿಗಲ್: ಅಭಿನಂದನಾ ಸಮಾರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಂದ ಆಧಾರ ರಹಿತ ಸುದ್ದಿ ನಂಬಿ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಸಭೆಯಲ್ಲಿ ಸಂತಾಪ ಸೂಚಿಸಿ ನಂತರ ವಿಷಾಧಿಸಿದ ಘಟನೆ ಅಭಿನಂದನೆ ಸಮಾರಂಭದಲ್ಲಿ ನಡೆಯಿತು.
ಸಭೆಯ ಆರಂಭಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಂದ ಆಧಾರ ರಹಿತ ಸುದ್ದಿ ನೋಡಿದ ಬಿಜೆಪಿ ಮುಖಂಡರೊಬ್ಬರು, ಸುದ್ದಿ ಖಚಿತ ಪಡಿಸಿಕೊಳ್ಳದೆ ವೇದಿಕೆ ನಿರೂಪಿಸುತ್ತಿದ್ದವರಿಗೆ ಅಡ್ವಾಣಿಯವರು ನಿಧನರಾಗಿದ್ದು ಸಂತಾಪಕ್ಕಾಗಿ ಮೌನಾಚರಣೆ ಮಾಡುವಂತೆ ಮನವಿ ಮಾಡಿದ ಮೇರೆಗೆ ನಿರೂಪಕರು ಸಂತಾಪ ಸೂಚಿಸಲು ಸಭೆಯಲ್ಲಿದ್ದವರಿಗೆ ಮನವಿ ಮಾಡಿದ ಮೇರೆಗೆ ಒಂದು ನಿಮಿಷ ಮೌನಾಚರಣೆ ಆಚರಿಸಿದರು. ಸಂಸದ ಡಾ.ಸಿ.ಎನ್.ಮಂಜುನಾಥ, ಮಾಜಿ ಪ್ರಧಾನಿ ಅಡ್ವಾಣಿಜಿಯವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು ಮಾಡಿದ್ದು ಮೌನಾಚರಣೆಯಲ್ಲ ಅವರ ಅರೋಗ್ಯ ವೃದ್ಧಿಗೆ ಪ್ರಾರ್ಥನೆ ಎಂದು ಭಾವಿಸೋಣ ಎಂದು ಆದ ಅಭಾಸಕ್ಕೆ ತೆರೆ ಎಳೆದರು.

Get real time updates directly on you device, subscribe now.

Comments are closed.

error: Content is protected !!