ಕರು ಕೊಂದ ಚಿರತೆ- ಆತಂಕದಲ್ಲಿ ಗ್ರಾಮಸ್ಥರು

21

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ತೂಬಿನಕಟ್ಟೆ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಸೀಮೆ ಹಸುವಿನ ಕರುವೊಂದನ್ನು ಬಲಿ ತೆಗೆದುಕೊಂಡಿರುವ ಘಟನೆ ನಡೆದಿದೆ.
ಮಾಯಸಂದ್ರ ಹೋಬಳಿಯ ತೂಬಿನಕಟ್ಟೆಯ ನಿವಾಸಿ ವಿಜಯ್ ಎಂಬುವವರು ತೋಟದ ಮನೆಯಲ್ಲಿ ಸೀಮೆ ಹಸುವಿನ ಕರುವೊಂದನ್ನು ಸಾಕಿದ್ದರು, ಚಿರತೆ ರಾತ್ರಿ ವೇಳೆ ಮನೆ ಬಳಿಯೇ ಬಂದು ರಕ್ತ ಹೀರಿ ಕೊಂದು ಕರುವಿನ ಸ್ವಲ್ಪ ಭಾಗ ತಿಂದು ಪರಾರಿಯಾಗಿದೆ.
ಮನೆ ಬಳಿಯೆ ಚಿರತೆ ಸಂಚಾರ ಮಾಡಿ ಕರು ಬಲಿ ತೆಗೆದುಕೊಂಡಿರುವುದು ಜನರ ನಿದ್ದೆಗೆಡಿಸಿದೆ, ಕಳೆದ ಒಂದೆರೆಡು ತಿಂಗಳಿನಿಂದಲೂ ಚಿರತೆಯ ಕಾಟ ಹೆಚ್ಚಾಗಿದೆ, ಗ್ರಾಮದಲ್ಲಿದ್ದ ನಾಯಿ ಸೇರಿದಂತೆ ಇತರೆ ಪ್ರಾಣಿಗಳನ್ನು ಚಿರತೆ ಬೇಟೆಯಾಡಿ ತಿನ್ನುತ್ತಿತ್ತು, ಈಗ ಮನೆಗಳ ಬಳಿಯೇ ಬಂದು ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ ಎಂದು ವಿಜಯ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅರಣ್ಯ ಇಲಾಖಾ ಸಿಬ್ಬಂದಿ ಬೋನು ತಂದಿರಿಸಿ ಚಿರತೆ ಸೆರೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!