ಕೆ ಎಸ್ ಆರ್ ಟಿ ಸಿ ಬಸ್ ಗೆ ಸಿಲುಕಿ 21 ಕುರಿ ಸಾವು

ಶಿರಾ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಘಟನೆ

17

Get real time updates directly on you device, subscribe now.


ಶಿರಾ: ನಾಯಿಗೆ ಬೆದರಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಕುರಿಗಳು ಕೆ ಎಸ್ ಆರ್ ಟಿ ಸಿ ಬಸ್ ಗೆ ಸಿಲುಕಿ ಸುಮಾರು 21 ಕುರಿ ಧಾರಣವಾಗಿ ಸಾವನ್ನಪ್ಪಿರುವ ಘಟಕೆ ಶಿರಾ ರಾಷ್ಟ್ರೀಯ ಹೆದ್ದಾರಿ 48ರ ಅಯೋಧ್ಯ ಹೋಟೆಲ್ ಮುಂಬಾಗ ಬುಧವಾರ ನಡೆದಿದೆ.
ಶಿರಾ ನಗರದ ಗುಡ್ಡದಹಟ್ಟಿ ವಾಸಿ ಈರಣ್ಣ ಎಂಬವರಿಗೆ ಸೇರಿದ ಸುಮಾರು 65 ಕುರಿ ಮೇಯಿಸಲು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನಾಯಿಯೊಂದು ಕುರಿಗಳನ್ನು ಬೆದರಿಸಿದ್ದು ಬೆದರಿದ ಕುರಿಗಳು ಏಕಾಏಕಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿವೆ, ಅದೇ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ವೋಲ್ವೋ ಬಸ್ ಬಂದಿದ್ದು, ಬಸ್ಸಿನ ಚಕ್ರಕ್ಕೆ ಸಿಲುಕಿ ಸುಮಾರು 21 ಕುರಿ ಸ್ಥಳದಲ್ಲಿ ಸಾವನ್ನಪ್ಪಿವೆ. ಹಲವು ಕುರಿಗಳು ಗಾಯಗೊಂಡಿವೆ, ಸ್ಥಳಕ್ಕೆ ಶಿರಾ ನಗರ ಪೊಲೀಸರು ಹಾಗೂ ಪಶು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ, ಕುರಿಗಳ ಮಾಲೀಕ ಈರಣ್ಣ ಅವರು ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!