ದಂತ ವೈದ್ಯನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ

18

Get real time updates directly on you device, subscribe now.


ತುಮಕೂರು: ತಾಲ್ಲೂಕಿನ ಗುಳೂರು ಮೂಲದ ಯುವತಿ (22) ನೀಡಿದ ದೂರಿನ ಮೇರೆಗೆ ನಗರದ ಮಹಿಳಾ ಠಾಣೆಯಲ್ಲಿ ಜು.15 ರಂದು ಅತ್ಯಾಚಾರದ ಕೇಸು ದಾಖಲಾಗಿದ್ದು ನಗರದ ಡಾ.ಸಂಜಯ್ನಾಯಕ್ ಹೆಸರು ಕೇಳಿ ಬಂದಿದೆ.
ರಾಜ್ಯ ಯುವ ಪ್ರಶಸ್ತಿ ವಿಜೇತ ಡಾ.ಸಂಜಯ್ ನಾಯಕ್ ಸಮಾಜ ಸೇವಕರಾಗಿದ್ದು ವಿವಿಧ ಸಂಘ-ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಅವರು ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ ಎನ್ನಲಾಗಿದೆ.
ಆರೋಪಿ ದಂತ ವೈದ್ಯರಾಗಿದ್ದು ಅವರ ಚಿಕಿತ್ಸಾಲಯಕ್ಕೆ ಬಂದ ಯುವತಿಗೆ ಅತ್ಯಾಚಾರವೆಸಗಿದ್ದಾರೆಂದು ಯುವತಿ ನೀಡಿದ ದೂರಿನ ಆಧಾರ ಮೇಲೆ ಕೇಸು ದಾಖಲಾಗಿದೆ, ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ. ವಾಸ್ತವ ವಿಚಾರ ತನಿಖೆಯಿಂದ ಹೊರಬರಬೇಕಿದೆ.

Get real time updates directly on you device, subscribe now.

Comments are closed.

error: Content is protected !!