ಎಂ.ಎನ್.ಕೋಟೆ ಗ್ರಾಮದಲ್ಲಿ ಬ್ರಹ್ಮ ರಥೋತ್ಸವ

20

Get real time updates directly on you device, subscribe now.


ಗುಬ್ಬಿ: ತಾಲೂಕಿನ ಎಂ.ಎನ್.ಕೋಟೆ, ಅಳಿಲುಘಟ್ಟ, ಹೊಸಕೆರೆ, ಕಡಬ, ಕಲ್ಲೂರು, ಸೇರಿದಂತೆ ಹಲವು ದೇವಾಲಯಗಳಲ್ಲಿ ಏಕಾದಶಿಯ ಸಂಭ್ರಮ ಮನೆ ಮಾಡಿತ್ತು.
ಮುಂಜಾನೆಯಿಂದಲೇ ಹಲವು ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು, ಆಂಜನೇಯ ಸ್ವಾಮಿ ದೇವಾಲಯಗಳು, ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯಗಳು ಹಾಗೂ ವೆಂಕಟೇಶ್ವರನ ದೇವಾಲಯಗಳಲ್ಲಿ ಬಹಳ ವಿಶೇಷವಾಗಿ ಏಕಾದಶಿ ಆಯೋಜನೆ ಮಾಡಲಾಗಿದ್ದು, ಎಂ.ಎನ್.ಕೋಟೆ ಗ್ರಾಮದಲ್ಲಿ ಬ್ರಹ್ಮ ರಥೋತ್ಸವವನ್ನು ಸಾವಿರಾರು ಜನರು ರಥ ಎಳೆಯುವ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಯಿತು, ಪುರಾತನ ಕಾಲದ ಇತಿಹಾಸ ಹೊಂದಿರುವ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಆಯೋಜನೆ ಮಾಡಲಾಗಿತ್ತು, ಈ ದೇವಾಲಯಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದ್ದು ದೊಡ್ಡ ಮಟ್ಟದ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಪುನೀತರಾಗುತ್ತಾರೆ, ಇಲ್ಲಿರುವ ಬಿಲ್ಲು ಹಾಗೂ ಬಾಣ ಬಹಳ ಶ್ರೇಷ್ಠವಾಗಿದೆ, ಇದೇ ರೀತಿಯಲ್ಲಿ ಅಳಿಲುಘಟ್ಟ, ಹೊಸಕೆರೆ ಭಾಗದಲ್ಲಿಯೂ ವಿಶೇಷವಾದ ಜಾತ್ರಾ ಸಂಭ್ರಮ ಮನೆ ಮಾಡಿತ್ತು.

Get real time updates directly on you device, subscribe now.

Comments are closed.

error: Content is protected !!