ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಬದುಕಲಿ

16

Get real time updates directly on you device, subscribe now.


ತುಮಕೂರು: ಕ್ಷುಲ್ಲಕವಾಗಿ, ಬೇಜವಾಬ್ದಾರಿಯಿಂದ ಬದುಕಿ, ಅದರಂತೆ ಸಿದ್ಧಾಂತ, ತತ್ತ್ವಗಳನ್ನು ರೂಪಿಸುತ್ತಿರುವುದು ಸಮಾಜದದುರಂತ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಕೃಷ್ಣೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಕ್ಷೇಮಾಭಿವೃದ್ಧಿಘಟಕ, ಕೌಶಲ್ಯಾಭಿವೃದ್ಧಿಘಟಕ, ವಿವಿ ವಿಜ್ಞಾನ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗಗಳ ವತಿಯಿಂದ ಆಯೋಜಿಸಿದ್ದ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಆಲೋಚನೆಗಳಿಂದ ಕೂಡಿದ ಬದುಕು ನಮ್ಮದಾಗಬೇಕು, ಶಿಕ್ಷಣವೆಂದರೆ ವಿದ್ಯಾರ್ಥಿಗಳು ಎಲ್ಲವನ್ನೂ ಸಮಸ್ಯೆಯೆಂದು ಪರಿಗಣಿಸದೆ, ಅವಕಾಶಗಳೆಂದು ಪರಿಗಣಿಸಿ, ಸದಾಧನಾತ್ಮಕವಾಗಿರುವುದನ್ನು ಕಲಿಸಿ, ಪಠ್ಯಕ್ರಮದ ಚೌಕಟ್ಟನ್ನು ಮೀರಿ ಜ್ಞಾನ ಸಂಪಾದಿಸಲು ಪ್ರೇರೇಪಿಸುವುದು, ನಮ್ಮೊಳಗಿರುವ ಪೂರ್ಣತೆಯನ್ನು ಉಜ್ವಲಗೊಳಿಸುವುದು ಎಂದರು.

ವಿಫಲವಾದ ವ್ಯಕ್ತಿಗಳು ಸದಾಕಾರಣ ಹೇಳುತ್ತಾರೆ, ಅಧಿಕಾರವೆಂದರೆ ಶಿಕ್ಷಣ, ಕೆಲಸ- ಸಂಬಳವಲ್ಲ, ವಾಸ್ತವವಾಗಿ ಜ್ಞಾನ, ಜ್ಞಾನದ ಅಳತೆ ನೋಡಿ ಕೆಲಸ ಸಿಗುವ ಕಾಲ ಭವಿಷ್ಯದಲ್ಲಿ ಎದುರಾಗಲಿದೆ, ಬದುಕಿನ ಸ್ಪರ್ಧೆಯಲ್ಲಿ ಜ್ಞಾನದ ಗುಣಮಟ್ಟವನ್ನು ಉತ್ಕೃಷ್ಟಗೊಳಿಸಿಕೊಳ್ಳತ್ತಾ ಸಾಗಬೇಕು, ಉನ್ನತ ಸ್ಥಾನಕ್ಕೇರಿರುವವರಿಗೆ ಸಾಧ್ಯವಾಗಿರುವುದು ನಮಗೇಕೆ ಸಾಧ್ಯವಾಗದು ಎಂದು ಪ್ರಶ್ನೆ ಕೇಳಿಕೊಳ್ಳುವ ಸಮಯವಿದು ಎಂದರು.

ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿಜಪಾನಂದಜೀ ಪ್ರಾಸ್ತಾವಿಕ ನುಡಿಗಳನ್ನಾಡಿ, ನಿರ್ಧಿಷ್ಟ ಗುರಿಯಿಲ್ಲದಿರುವ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ರೂಪಿಸುತ್ತಿವೆ, ಉಜ್ಜೀವನಕ್ಕಾಗಿ ಏನು ಮಾಡಬೇಕೆಂಬುದನ್ನು ನಿರ್ಧರಿಸುವ ಕಾಲವಿದು, ಮಾನವೀಯ ಮೌಲ್ಯಗಳ ಹಿಂದೆ ಎಲ್ಲರೂ ಸಾಗಬೇಕು ಎಂದರು.

ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 2ನೇ ಶತಮಾನ ಆವಿಷ್ಕಾರಗಳ ಕಾಲವಾಗಿತ್ತು, 21ನೇ ಶತಮಾನಜ್ಞಾನದ ಯುಗವಾಗಿದೆ, ಬದುಕು ರೂಪಿಸಿಕೊಳ್ಳುವ ಅವಕಾಶಗಳು ಈ ಯುಗದಲ್ಲಿ ಹೆಚ್ಚಿದೆ ಎಂದರು.
ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್.ಕೆ, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಕರಿಯಣ್ಣ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಎಂ.ಶೇಟ್, ಕೌಶಲ್ಯಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಕೆ.ಜಿ.ಪರಶುರಾಮ, ಡಾ. ಜ್ಯೋತಿನಿ, ಡಾ.ಗುಂಡೇಗೌಡ ಇದ್ದರು.

Get real time updates directly on you device, subscribe now.

Comments are closed.

error: Content is protected !!