ಪ್ರೀತಿ ನಿರಾಕರಿಸಿದ್ದಕ್ಕೆಯುವತಿಗೆ ಚಾಕು ಇರಿದ ಯುವಕ

21

Get real time updates directly on you device, subscribe now.


ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಪಂನ ಬುಡ್ಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವತಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ನಂತರ ಆತನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಅಕ್ಕಿರಾಂಪುರದ ರಾಮಾಚಾರಿ (30) ಚಾಕುವಿನಿಂದ ಇರಿದ ಯುವಕ, ಬುಡ್ಡನೇಹಳ್ಳಿ ಗೊಲ್ಲರಹಟ್ಟಿಯ ಯುವತಿ ಇರಿತಕ್ಕೆ ಒಳಗಾದವರು, ಯುವತಿ ವಿಧವೆಯಾಗಿದ್ದು, ಏಳನೇ ತರಗತಿ ಓದುತ್ತಿರುವ ಮಗನಿದ್ದಾನೆ, ಈಕೆ ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ನಾಲ್ಕೈದು ವರ್ಷಗಳ ಹಿಂದೆ ರಾಮಾಚಾರಿಯ ಪರಿಚಯವಾಗಿತ್ತು, ಇಬ್ಬರ ನಡುವೆ ಸಲುಗೆ ಬೆಳೆದಿತ್ತು, ಇತ್ತೀಚೆಗೆ ಯುವತಿ ರಾಮಾಚಾರಿಯಿಂದ ದೂರವಿರಲು ಯತ್ನಿಸಿದರು, ಗುರುವಾರ ತಡರಾತ್ರಿ ಮಧ್ಯ ಸೇವಿಸಿದ್ದ ರಾಮಾಚಾರಿ ಯುವತಿ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಈ ವೇಳೆ ಗಲಾಟೆಗೆ ಮುಂದಾದ ಯುವತಿ ಹೊಟ್ಟೆ ಮತ್ತು ತಲೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ, ಗ್ರಾಮಸ್ಥರು ಬರುವುದನ್ನು ಕಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಆತ್ಮಹತ್ಯೆಗೆ ಯತ್ನ: ಈ ಘಟನೆ ನಡೆದ ಬಳಿಕ ರಾಮಾಚಾರಿ ಕಾಶಾಪುರ ಬಳಿ ತಲೆಮರೆಸಿಕೊಂಡಿದ್ದನು, ಮದ್ಯದ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ವಿಷ ಸೇವಿಸಿ, ಚಾಕುವಿನಿಂದ ಕುಯ್ದು ಕೊಂಡಿದ್ದಾನೆ, ಮದ್ಯದ ನಶೆ ಇಳಿದ ನಂತರ ಬದುಕಬೇಕು ಎದು ತಡರಾತ್ರಿ ಕಿರುಚಿದ್ದಾನೆ, ಮಾಹಿತಿ ತಿಳಿದ ಪೋಲಿಸರು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಕರೆ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ, ಸದ್ಯಕ್ಕೆ ರಾಮಾಚಾರಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಯುವತಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ, ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!