28 ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು

25

Get real time updates directly on you device, subscribe now.


ಹುಳಿಯಾರು: ದುಷ್ಕರ್ಮಿಗಳು 4 ವರ್ಷದ 28 ಅಡಿಕೆ ಗಿಡಗಳನ್ನು ಕಡಿದಿರುವ ಘಟನೆ ಹುಳಿಯಾರು ಸಮೀಪದ ಬೆಳಗುಲಿ ಸರ್ವೆ ನಂಬರ್ 278/7 ರಲ್ಲಿ ಬುಧವಾರ ರಾತ್ರಿ ಜರುಗಿದೆ.
ಹಂದನಕೆರೆ ಹೋಬಳಿಯ ಪಾಪನಕೋಣ ಗ್ರಾಮದ ರಂಗಲಕ್ಷ್ಮಮ್ಮ ಅವರಿಗೆ ಸೇರಿದ ಅಡಿಕೆ ಗಿಡಗಳಾಗಿದ್ದು ಇವರು ಬೆಳಗುಲಿ ಸರ್ವೆ ನಂಬರ್ 278/7 ರಲ್ಲಿನ 5 ಗುಂಟೆ ಜಮೀನಿನಲ್ಲಿ ತೆಂಗು ಮತ್ತು ಅಡಿಕೆ ಬೆಳೆ ಇಟ್ಟಿದ್ದರು, ಬುಧವಾರ ರಾತ್ರಿ ರಂಗಲಕ್ಷ್ಮಮ್ಮ ಊರಿನಲ್ಲಿ ಇಲ್ಲದ ಸಂದರ್ಬದಲ್ಲಿ ಈ ದುಷ್ಕೃತ್ಯ ಜರುಗಿದೆ.
4 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಗಿಡಗಳನ್ನು ಕಡಿದಿರುವ ದುಷ್ಕರ್ಮಿಗಳನ್ನು ಪತ್ತೆಯಚ್ಚಿ ಆಗಿರುವ ನಷ್ಟ ಭರಿಸಿಕೊಡುವ ಜೊತೆಗೆ ಆರೋಪಿಗಳಿಗೆ ತಕ್ಷ ಶಿಕ್ಷ ನೀಡಬೇಕೆಂದು ಚಿಕ್ಕನಾಯಕನಹಳ್ಳಿ ಪೊಲೀಸರಲ್ಲಿ ರಂಗಲಕ್ಷ್ಮಮ್ಮ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!