ಸಿನಿಮಿಯ ಶೈಲಿಯಲ್ಲಿ ಖತರ್ನಾಕ್ ಕಳ್ಳನ ಸೆರೆ

ಪೊಲೀಸ್ ತಂಡದ ಕಾರ್ಯಕ್ಕೆ ಎಸ್ ಪಿ ಮೆಚ್ಚುಗೆ- ಪ್ರಶಂಸನಾ ಪತ್ರ ವಿತರಣೆ

10

Get real time updates directly on you device, subscribe now.


ಕೊರಟಗೆರೆ: ಗೃಹ ಸಚಿವರ ಕ್ಷೇತ್ರವಾದ ಕೊರಟಗೆರೆ ಪಟ್ಟಣದಲ್ಲಿ ಜು.20 ರಂದು ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿ ಬೆಂಗಳೂರಿನ ಸದಾಶಿವ ನಗರದ ಟ್ರಾಫಿಕ್ ಸಿಗ್ನಲ್ ನಲ್ಲಿ ದ್ವಿಚಕ್ರ ವಾಹನದ ಮೂಲಕ ಆಗಮಿಸಿದ ವೇಳೆ ಕೊರಟಗೆರೆ ಪೊಲೀಸ್ ಠಾಣೆಯ ಪೇದೆ ದೊಡ್ಡಲಿಂಗಯ್ಯ ಸಿನಿಮಿಯ ರೀತಿಯಲ್ಲಿ ಹಿಡಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಳಾಲ ಮತ್ತು ತುಮಕೂರು ಜಿಲ್ಲೆಯ ಹತ್ತಾರು ಪೊಲೀಸ್ ಠಾಣೆಯಲ್ಲಿ ನಟೋರಿಯಸ್ ರೌಡಿ ಮತ್ತು ಖತರ್ನಾಕ್ ಕಳ್ಳ ಮಂಜುನಾಥ (46) ಅಲಿಯಾಸ್ ಹೊಟ್ಟೆ ಮಂಜನ ಮೇಲೆ 75 ಕ್ಕೂ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿದೆ, ನಟೋರಿಯಸ್ ರೌಡಿಯನ್ನು ಪೊಲೀಸ್ ಪೇದೆ ದೊಡ್ಡಲಿಂಗಯ್ಯ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸಿನಿಮೀಯ ಶೈಲಿಯಲ್ಲಿ ಹಿಡಿದು ವಶಕ್ಕೆ ಪಡೆದಿದ್ದಾರೆ.

ಪೇದೆ ಮೇಲೆ ಆರೋಪಿಯಿಂದ ಹಲ್ಲೆ
ಸದಾಶಿವ ನಗರದ ಟ್ರಾಫಿಕ್ ನಲ್ಲಿ ಕೊರಟಗೆರೆ ಪೇದೆ ದೊಡ್ಡಲಿಂಗಯ್ಯ ಆರೋಪಿ ಹೊಟ್ಟೆ ಮಂಜನನ್ನು ನಿಲ್ಲಿಸಲು ಪ್ರಯತ್ನಿಸಿದ ವೇಳೆ ಪೇದೆ ಮೇಲೆಯೇ ಬೈಕ್ ಹತ್ತಿಸಲು ಮುಂದಾಗಿದ್ದಾನೆ, ವಾಹನ ಮೇಲೆ ಬಂದ್ರು ಆರೋಪಿಯನ್ನು ಬಿಡದೆ ಆತನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ ಮೇಲು ವಾಹನ ವೇಗವಾಗಿ ಚಲಾಯಿಸಿದ್ದಾನೆ, ನಂತರ ಸಂಚಾರಿ ಠಾಣೆಯ ಮಹಿಳಾ ಎಎಸೈ ಮೇಲೆಯು ಆರೋಪಿ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Get real time updates directly on you device, subscribe now.

Comments are closed.

error: Content is protected !!