ರೆಡ್ಡಿ ಚಿನ್ನಯಲ್ಲಪ್ಪಗೆ ಶ್ರದ್ಧಾಂಜಲಿ ಸಲ್ಲಿಸಿದ ಪರಂ

25

Get real time updates directly on you device, subscribe now.


ತುಮಕೂರು: ನಗರದ ಹಿಂದುಳಿದ ವರ್ಗಗಳ ಒಕ್ಕೂಟದ ಕಚೇರಿಯಲ್ಲಿ ನಿಧನರಾದ ಟೂಡಾ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಚಿವ ರಾದ ಪರಮೇಶ್ವರ್, ಕೆ.ಎನ್.ರಾಜಣ್ಣ ಅವರು ರೆಡ್ಡಿ ಚಿನ್ನಯಲ್ಲಪ್ಪ ಅಂತಿಮ ದರ್ಶನ ಪಡೆದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಸಂಸ್ಮರಣ ನುಡಿಗಳನ್ನಾಡಿ ತುಮಕೂರು ನಗರಸಭೆ, ಟೂಡಾ ಎರಡಕ್ಕೂ ಅಧ್ಯಕ್ಷರಾದ ಹೆಗ್ಗಳಿಕೆ ರೆಡ್ಡಿ ಚಿನ್ನಯಲ್ಲಪ್ಪ ಅವರಿಗೆ ಸಲ್ಲುತ್ತದೆ, ಹಿಂದುಳಿದ ಶೋಷಿತ ಸಮುದಾಯದ ಪರ ಕಾಳಜಿಯುಳ್ಳವರಾಗಿದ್ದ ರೆಡ್ಡಿ ಚಿನ್ನಯಲ್ಲಪ್ಪ ಅವರು ಸಿನಿಮಾ ನಟರಾಗಿಯೂ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದರು. ತುಮಕೂರು ನಗರಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ, ಅವರ ಆತ್ಮಕ್ಕೆ ಚಿರಶಾಂತಿ ಕೋರುವೆಯೆಂದರು.

ಒಕ್ಕೂಟದ ಉಪಾಧ್ಯಕ್ಷ ಪಿ.ಮೂರ್ತಿ ಅವರು ನುಡಿನಮನ ಸಲ್ಲಿಸಿ ಮಾತನಾಡಿ ರೆಡ್ಡಿ ಚಿನ್ನಯಲ್ಲಪ್ಪ ಅವರು ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿದ್ದರು, ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಕೆಎನ್ ಆರ್ ಎಂಎಲ್ಸಿ ಆಗಿದ್ದ ಸಂದರ್ಭದಲ್ಲಿ ಟೂಡಾ ಅಧ್ಯಕ್ಷ ಪದಗ್ರಹಣ ಸ್ವೀಕರಿಸಿದ ಸಮಾರಂಭಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೆವು, ಅವರಲ್ಲಿದ್ದ ದೂರದರ್ಶಿತ್ವ ನಾಯಕತ್ವ ಗುಣ, ಪಕ್ಷ ನಿಷ್ಠೆ ಮಾದರಿಯಾದುದು ಎಂದು ಸ್ಮರಿಸಿದರು.

Get real time updates directly on you device, subscribe now.

Comments are closed.

error: Content is protected !!