ಟಾಟಾ ಏಸ್ ನಲ್ಲಿ ವ್ಯಕ್ತಿ ಸಜೀವ ದಹನ

5

Get real time updates directly on you device, subscribe now.


ಪಾವಗಡ: ತಾಲ್ಲೂಕಿನ ಪಳವಳ್ಳಿ ರಸ್ತೆಯ ವೀರಮ್ಮನಹಳ್ಳಿ ಗೇಟ್ ಬಳಿಯ ರೈಲ್ವೆ ಮೇಲ್ ಸೇತುವೆ ಹತ್ತಿರ ಖರಾಬು ಜಾಗದಲ್ಲಿ ಟಾಟಾ ಏಸ್ ಜೊತೆ ವ್ಯಕ್ತಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ವೈ.ಎನ್.ಹೊಸಕೋಟೆಯ ವಾಸಿ ರವಿಕುಮಾರ್ (45) ಎನ್ನಲಾಗಿದೆ, ಇವರು ತೊಗಟವೀರ ಜನಾಂಗ ಸೇರಿದ ವ್ಯಕ್ತಿ ಎಂದು ಮೂಲಗಳ ಮೂಲಕ ತಿಳಿಯಲಾಗಿದೆ.
ಪಾವಗಡ ಪೊಲೀಸ್ ಠಾಣಾ ಅಧಿಕಾರಿಗಳಿಂದ ವಿಷಯ ತಿಳಿದ ನಂತರ ಮೃತನ ಪತ್ನಿಯು ಒಬ್ಬ ಮೇಷ್ಟ್ರು ಬಾಡಿಗೆಗೆ ಕರೆದಿದ್ದರೆಂದು ಮನೆಯಲ್ಲಿ ಹೇಳಿದ್ದಾರೆ ಎಂದು ಸುಟ್ಟಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆಂದು ತಿಳಿಯಲಾಗಿದೆ, ಪೊಲೀಸ್ ಠಾಣೆಗೆ ಬಂದು ತನ್ನ ಗಂಡ ರವಿಕುಮಾರ್ ಲೋನ್ ಮಾಡಿ ಟಾಟಾ ಲಗೇಜ್ ಗಾಡಿ ಖರೀದಿಸಿದ್ದು, ಬಾಡಿಗೆ ಓಡಿಸುತ್ತಿದ್ದರು, ಗುರುವಾರ ರಾತ್ರಿ 9.30 ಸಮಯದಲ್ಲಿ ತುಮಕೂರಿಗೆ ಬಾಡಿಗೆ ಇದೆ ಎಂದು ಮನೆ ಬಿಟ್ಟವರು ವಾಪಸ್ ಮನೆಗೆ ಬಂದಿಲ್ಲವೆಂದು ತಿಳಿಸಿದ್ದಾರೆ.
ಯಾರೋ ದುಷ್ಕಮಿಗಳು ಕೊಲೆ ಮಾಡಿ ಸುಟ್ಟು ಹಾಕಿರಬಹುದು ಎಂದು ಶಂಕೆ ಇದೆ ಎಂದು ಪೊಲೀಸ್ ಠಾಣೆಗೆ ಬಂದು ದೂರು ನೀಡಿ ಕೊಲೆ ಮಾಡಿರುವ ಆರೋಪಿಗಳನ್ನು ತಕ್ಷಣ ಹಿಡಿದು ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮೃತನ ಪತ್ನಿ ದೂರು ನೀಡಿದ್ದಾರೆ, ಮೃತನಿಗೆ ಪತ್ನಿ ಮತ್ತು ಎರಡು ಮಕ್ಕಳು ಇದ್ದಾರೆ.
ಸ್ಥಳಕ್ಕೆ ಪಾವಗಡ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುರೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!