ಜಿಲ್ಲಾಧಿಕಾರಿಗಳಿಂದ ಜಂಬೂಸವಾರಿ ಮಾರ್ಗ ಪರಿಶೀಲನೆ

8

Get real time updates directly on you device, subscribe now.


ತುಮಕೂರು: ಜಿಲ್ಲಾಡಳಿತದಿಂದ ನಗರದಲ್ಲಿ ಅಕ್ಟೋಬರ್ 11 ಹಾಗೂ 12ರಂದು 2 ದಿನ ಜರುಗಲಿರುವ ತುಮಕೂರು ದಸರಾ- 2024ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅರಣ್ಯ ಉಪ ಸಂರಕ್ಷಾಣಾಧಿಕಾರಿ ಅನುಪಮ, ಮುಜರಾಯಿ ತಹಶೀಲ್ದಾರ್ ಸವಿತಾ ಅವರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಆನೆಯೊಂದಿಗೆ ಜಂಬೂಸವಾರಿ ಮಾರ್ಗ ಪರಿಶೀಲಿಸಿದರು.
ಅಧಿಕಾರಿಗಳ ತಂಡವು ಟೌನ್ ಹಾಲ್ ವೃತ್ತದಿಂದ ಗಾಯತ್ರಿ ಚಿತ್ರ ಮಂದಿರ, ಎಂ.ಜಿ.ರಸ್ತೆ ಕಡೆಗೆ ತಿರುಗಿ ಜಿಲ್ಲಾಧಿಕಾರಿಗಳ ಕಚೇರಿ, ಅಮಾನಿಕೆರೆ ಮಾರ್ಗವಾಗಿ ಕೋತಿತೋಪು, ಶಿವ ಕುಮಾರ ಸ್ವಾಮೀಜಿ ವೃತ್ತ, ಭದ್ರಮ ವೃತ್ತ ಮೂಲಕ ಜೂನಿಯರ್ ಕಾಲೇಜು ಆವರಣದವರೆಗೆ ಕಾಲ್ನಡಿಗೆ ಮೂಲಕ ಜಂಬೂ ಸವಾರಿ ಮಾರ್ಗ ಪರಿಶೀಲಿಸಿತು.
ಈ ಸಂದರ್ಭದಲ್ಲಿ ಬೆಸ್ಕಾಂ ಕಾರ್ಯ ನಿರ್ವಾಹ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ, ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಮತ್ತಿರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!