ನವವಿವಾಹಿತ ಆತ್ಮಹತ್ಯೆ

10

Get real time updates directly on you device, subscribe now.


ಹುಳಿಯಾರು: ತಮ್ಮ ಹಳೆಯ ಮನೆಯಲ್ಲಿ ನವ ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಳಿಯಾರು ಹೋಬಳಿಯ ಬರದಲೇಪಾಳ್ಯದಲ್ಲಿ ನಡೆದಿದೆ.
ಬರದಲೇಪಾಳ್ಯದ ಮಂಜುನಾಥ (28) ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾನೆ, ಈತ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ರೂಮಿನ ತೀರಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಈತ 6 ತಿಂಗಳ ಹಿಂದೆ ತಮ್ಮ ಹತ್ತಿರದ ಸಂಬಂಧಿ ಚೈತ್ರ ಅವರನ್ನು ಮದುವೆಯಾಗಿದ್ದರು, 20 ದಿನಗಳ ಹಿಂದೆ ತಮ್ಮ ನೂತನ ಮನೆಯ ಗೃಹಪ್ರವೇಶ ಸಹ ಮಾಡಿದ್ದರು, ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!