12 ವರ್ಷದ ಬಾಲಕ ಆತ್ಮಹತ್ಯೆ

4

Get real time updates directly on you device, subscribe now.


ಹುಳಿಯಾರು: ಗಣಪತಿ ಉತ್ಸವಕ್ಕೆ ಹೋಗಬೇಡ ಎಂದು ಪೋಷಕರು ಹೇಳಿದಕ್ಕೆ ಬೆಸರಗೊಂಡು 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಳಿಯಾರು ಹೋಬಳಿಯ ಹೊನ್ನಯ್ಯನಪಾಳ್ಯದಲ್ಲಿ ನಡೆದಿದೆ.
ಪುಣ್ಯತಿತ್ (12) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ, ಈತ ಗಣಪತಿ ಉತ್ಸವಕ್ಕೆ ಹೋಗುವುದಾಗಿ ಕೇಳಿಕೊಂಡಿದ್ದಾನೆ, ಇದಕ್ಕೆ ಪೋಷಕರು ಹೋಗಬೇಡ ಮನೆಯಲ್ಲೇ ಇರು ಎಂದಿದ್ದಾರೆ, ಆದರೂ ಹೋಗೆಹೋಗುವುದಾಗಿ ಹಠ ಮಾಡಿದ್ದಾನೆ, ಆದರೂ ಪೋಷಕರು ಕೇಳದರೆ ಮನೆಯಲ್ಲೇ ಇರುವಂತೆ ಗದರಿಸಿ ತೋಟಕ್ಕೆ ಹೋಗಿದ್ದಾರೆ.
ಇದರಿಂದ ಬೇಸತ್ತ ಬಾಲಕ ಮನೆಯ ಕಬ್ಬಿಣದ ತೀರಿಗೆ ಡ್ರಿಪ್ ಬಳ್ಳಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಹುಳಿಯಾರಿನ ಕೆಪಿಎಸ್ ಶಾಲೆಯಲ್ಲಿ 7 ನೇ ತಗತಿಯಲ್ಲಿ ಬಾಲಕ ವ್ಯಾಸಂಗ ಮಾಡುತ್ತಿದ್ದ.

Get real time updates directly on you device, subscribe now.

Comments are closed.

error: Content is protected !!