ಐಜಿ ಲಾಬೂರಾಮ್ ಕುಣಿಗಲ್ ಗೆ ಭೇಟಿ

6

Get real time updates directly on you device, subscribe now.


ಕುಣಿಗಲ್: ಪಟ್ಟಣದ ಈದ್ ಮಿಲಾದ್ ಹಾಗೂ ಗಣೇಶ ಉತ್ಸವ ಅಚರಣೆ ಹಿನ್ನೆಲೆಯಲ್ಲಿ ಕೇಂದ್ರ ವಲಯದ ಐಜಿಪಿ ಪಟ್ಟಣಕ್ಕೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
ಕೇಂದ್ರ ವಲಯದ ಐಜಿ ಲಾಬೂರಾಮ್ ಸೋಮವಾರ ಪಟ್ಟಣಕ್ಕೆ ಭೇಟಿ ನೀಡಿ, ಈದ್ ಮಿಲಾದ್ ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಪೊಲೀಸರು ಕೈಗೊಂಡಿರುವ ಮುನ್ನಚ್ಚರಿಕೆ ಕ್ರಮದ ಬಂದೋಬಸ್ತ್ ಪರಿಶೀಲಿಸಿ ಸಭೆ ನಡೆಸಿದರು, ಎಎಸ್ಪಿ ಅಬ್ದುಲ್ ಖಾದರ್, ಡಿವೈಎಸ್ಪಿ ಒಂಪ್ರಕಾಶ್, ಸಿಪಿಐ ನವೀನ್ ಗೌಡ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆ ಮುಗಿಸಿ ಹೊರಡಲು ಮುಂದಾದ ಕೇಂದ್ರ ವಲಯದ ಐಜಿಪಿ ಅವರನ್ನು ಭೇಟಿಯಾದ ವಿವಿಧ ದಲಿತ ಪರ ಸಂಘಟನೆಯ ಮುಖಂಡರು, ದಲಿತರ ಸಮಸ್ಯೆಗೆ ಪೂರಕವಾಗಿ ಸ್ಥಳೀಯ ಕೆಲ ಪೊಲೀಸ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಪ್ರಕರಣ ದಾಖಲಾದರೂ ಆರೋಪಿಗಳ ಬಂಧಿಸುವುದಿಲ್ಲ, ದೌರ್ಜನ್ಯ ಪ್ರಕರಣಗಳಲ್ಲಿ ದಲಿತರಿಗೆ ಸಮರ್ಪಕ ರಕ್ಷಣೆ ನೀಡುತ್ತಿಲ್ಲ ಎಂದು ಅಹವಾಲು ಸಲ್ಲಿಸಿದರು, ಈ ಬಗ್ಗೆ ಪರಿಶೀಲಿಸುವುದಾಗಿ ಐಜಿಪಿ ಭರವಸೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!