ಪುರಸಭೆ ಮುಖ್ಯಾಧಿಕಾರಿ ಅಮಾನತು

2

Get real time updates directly on you device, subscribe now.


ಕುಣಿಗಲ್: ಪುರಸಭೆಯಿಂದ ವರ್ಗಾವಣೆಗೊಂಡರೂ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿ ಪುನಹ ಕುಣಿಗಲ್ ಪುರಸಭೆ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯಾಧಿಕಾರಿ ಶಿವಪ್ರಸಾದ್ರನ್ನು ಅಮಾನತುಗೊಳಿಸಿ ಪೌರಾಡಳಿತ ನಿರ್ದೇಶಕರು ಆದೇಶ ಮಾಡಿದ್ದಾರೆ.
ಮುಖ್ಯಾಧಿಕಾರಿ ಶಿವಪ್ರಸಾದ್ ಕರ್ತವ್ಯನಿರ್ವಹಣೆಯಲ್ಲಿ ಲೋಪ, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ವಿವಿಧ ನಿಧಿ ವರ್ಗಾವಣೆ, 18ನೇ ವಾರ್ಡ್ನಲ್ಲಿ ಬ ಖರಾಬ್ ಜಾಗಕ್ಕೆ ಖಾತೆ ಮಾಡಿರುವುದು, ಪುರಸಭೆ ವ್ಯಾಪ್ತಿ ಮೀರಿ 12ನೇ ವಾರ್ಡ್ನ ಬಿ ಎಸ್ ಎಲ್ ಆರ್ ಬಡಾವಣೆ ಇ- ಖಾತೆ ಮಾಡಿರುವುದು, 3ನೇ ವಾರ್ಡ್ ಪುರಸಭೆ ನಿವೇಶನ ಒತ್ತುವರಿ ತೆರವುಗೊಳಿಸದೆ ಇರುವುದು, ಬಫರ್ ಝೋನ್ ಪ್ರದೇಶದಲ್ಲಿ ನಿಯಮ ಮೀರಿ ಖಾತೆ ಮಾಡಿರುವುದು, ಪುರಸಭೆ ಕಾಮಗಾರಿಗಳ ಮೇಲ್ವಿಚಾರಣೆ ಮಾಡದೆ ಇರುವುದು, ವಾರ್ಡ್ವಾರು ಉದ್ದಿಮೆ ವಹಿ ಬೇಡಿಕೆ ವಹಿ ಹಾಜರು ಮಾಡದೆ ಇರುವುದು, ಮೋಟಾರು ವಾಹನಗಳ ಸಮರ್ಪಕ ನಿರ್ವಹಣೆ ಮಾಡದೆ ಇರುವುದು ಸೇರಿದಂತೆ ಪುರಸಭೆ ವಾಣಿಜ್ಯ ಮಳಿಗೆಗಳನ್ನು ಸಮರ್ಪಕವಾಗಿ ವಿಲೆ ಮಾಡದೆ ಇರುವುದು ಸೇರಿದಂತೆ ಅನೇಕ ಆರೋಪಗಳ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಮುಖ್ಯಾಧಿಕಾರಿ ಶಿವಪ್ರಸಾದರನ್ನು ಅಮಾನತುಗೊಳಿಸಿ ಕೋಲಾರ ಜಿಲ್ಲೆ ವೇಮಗಲ್- ಕುರುಗಲ್ ಪಟ್ಟಣ ಪಂಚಾಯಿತಿ ಸಮುದಾಯ ಸಂಘಟನಾಧಿಕಾರಿಯಾಗಿ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!