ಹೃದಯಾಘಾತದಿಂದ ವಿದ್ಯಾರ್ಥಿ ಸಾವು

3

Get real time updates directly on you device, subscribe now.


ಕೊರಟಗೆರೆ: ರವೀಂದ್ರ ಭಾರತಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ನಗುನಗುತ್ತಾ ನಲಿಯುತ್ತಾ ಆಟವಾಡುತ್ತಿದ್ದವನು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳಿದಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಪಟ್ಟಣದ ರವೀಂದ್ರ ಭಾರತಿ ವಿದ್ಯಾಮಂದಿರ ಸಮೀಪವಿರುವ ಶಬೀನಾ ಬೇಗಮ್ ಎಂಬುವರ 9ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ರೆಹಮಾನ್ (15) ಸಾವಿಗೀಡಾದ ದುರ್ದೈವಿಯಾಗಿದ್ದಾನೆ.

ಮೃತ ಮಹಮ್ಮದ್ ರೆಹಮಾನ್ ನನ್ನು ಮಕ್ಕಳಿಲ್ಲದ ಶಬೀನಾ ಬೇಗಂ ದಂಪತಿ ದತ್ತು ಪಡೆದಿದ್ದು, ಬಹಳ ಪ್ರೀತಿ ವಾತ್ಸಲ್ಯದಿಂದ ಪೋಷಿಸುತ್ತಿದ್ದರು ಎನ್ನಲಾಗುತ್ತಿದ್ದು, ತಾಯಿಯೊಡನೆ ಮನೆಯ ಮೇಲ್ಚಾವಣಿ ಮೇಲ್ಭಾಗ ಬಟ್ಟೆ ಒಗೆದು ಒಣಗಾಕಿದ ಬಣ್ಣೆ ತೆಗೆದುಕೊಂಡು ಬರಲು ಹೋದ ಸಂದರ್ಭದಲ್ಲಿ ತಾಯಿ ಶಬೀನಾ ಬೇಗಂ ಬಟ್ಟೆ ತಂದು ಒಂದೆರಡು ನಿಮಿಷಗಳಾದರೂ ಮಗ ಬಾರದಿದ್ದನ್ನು ಕಂಡು ಮತ್ತೆ ಮನೆ ಮೇಲ್ಭಾಗಕ್ಕೆ ಹೋಗಿ ನೋಡುವಷ್ಟರಲ್ಲಿ ಮಗು ಕುಸಿದು ಬಿದ್ದಿರುವುದನ್ನು ಕಂಡು ತಾಯಿ ಚೀರಾಟದಿಂದ ಅಕ್ಕಪಕ್ಕದ ಮನೆಯವರ ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸಿದರು ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳಿದಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್, ಪಿಎಸ್ ಐ ಚೇತನ್ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!