ತಾಯಿ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ

2

Get real time updates directly on you device, subscribe now.


ಕುಣಿಗಲ್: ದುಡಿದು ತಿನ್ನುವಂತೆ ಬುದ್ಧಿವಾದ ಹೇಳಿದ ತಾಯಿಯನ್ನೆ ಕೊಲೆ ಮಾಡಿದ್ದ ವಿರೂಪಾಕ್ಷ ಎಂಬಾತನಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ ಐವತ್ತು ಸಾವಿರ ದಂಡ ವಿಧಿಸಿದೆ.
ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಹಂಗರಹಳ್ಳಿ ಗ್ರಾಮದ ಜಯಮ್ಮ ಎಂಬಾಕೆ ಡೈರಿಗೆ ಹಾಲು ಹಾಕಿ, ಹೂವು ಮಾರಾಟ ಮಾಡಿ ಜೀವನ ನಡೆಸುತ್ತಿದ್ದು ಈತನ ಮಗ ವಿರೂಪಾಕ್ಷ ಎಂಬಾತ ಸರಿಯಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲೆ ವಾಸವಾಗಿದ್ದು, ತಾಯಿ ಕಷ್ಟಪಟ್ಟು ದುಡಿದ ಹಣ ಕೊಡದ ಕಾರಣ ತಾಯಿಯೊಂದಿಗೆ ವಾಗ್ವಾದ ನಡೆಸಿದ್ದು, ತಾಯಿಯ ಕೊಂದರೆ ತನಗೆ ಯಾರೂ ಹೇಳುವವರಿಲ್ಲ ಎಂದು ತೀರ್ಮಾನಿಸಿ, ಮನೆಯಲ್ಲಿದ್ದ ಗುಂಡು ಕಲ್ಲನ್ನು ತಾಯಿ ತಲೆ ಮೇಲೆ ಹಾಕಿ ಹತ್ಯೆ ಮಾಡಿದ್ದ.
ಘಟನೆ ಸಂಬಂಧಿಸಿದಂತೆ ವೃತ್ತ ನಿರೀಕ್ಷಕ ಎಂ.ಗುರುಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು, ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತುಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶೆ ವೈ.ಎಲ್.ಲಡಖಾನ್ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ, ಸರ್ಕಾರದ ಪರವಾಗಿ ಆರ್.ಟಿ.ಅರುಣಾ, ಕೆ.ಸಿ.ದೀಪಕ್ ವಾದ ಮಂಡಿಸಿದ್ದರು.

Get real time updates directly on you device, subscribe now.

Comments are closed.

error: Content is protected !!