ಅಪಘಾತದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿ ದುರ್ಮರಣ

352

Get real time updates directly on you device, subscribe now.

ತಿಪಟೂರು: ತಾಲೂಕು ಬಳುವನೇರಲು ಆರೋಗ್ಯ ಕೇಂದ್ರದ ಅರೆಕಾಲಿಕ ಆರೋಗ್ಯ ಸಿಬ್ಬಂದಿ ಅಶೋಕ್ ಮೃತಪಟ್ಟ ದುರ್ದೈವಿ, ತಿಪಟೂರಿನ ಸಾರ್ವಜನಿಕ ಆಸ್ಪತ್ರೆಯಿಂದ ಕೋವಿಡ್ ಲಸಿಕೆಗಳನ್ನು ತೆಗೆದುಕೊಂಡು ಹೋಗುತ್ತಿರುವಾಗ, ಹಾಲ್ಕುರಿಕೆ ರಸ್ತೆ ಹಳೇ ಪಾಳ್ಯ ಗೇಟ್ ಮುಂಭಾಗ ಎದುರಿಗೆ ಬಂದ ಇನ್ನೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ, ಅಪಘಾತಕ್ಕೆ ತಲೆಗೆ ಹೆಲ್ಮೆಟ್ ಇಲ್ಲದಿರುವುದೇ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ, ತಿಪಟೂರು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಈ ವೇಳೆ ನಗರಠಾಣೆ ವೃತ್ತನಿರೀಕ್ಷಕ ಶಿವಕುಮಾರ್ ಮಾತನಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು ಎಚ್ಚೆತ್ತು ಕೂಳ್ಳದಿರುವುದಕ್ಕೆ ನಿದರ್ಶನವಾಗಿದೆ, ಇನ್ನಾದರೂ ಸಾರ್ವಜನಿಕರು ಹೆಲ್ಮೆಟ್ ಧರಿಸಿ ವಾಹನ ಓಡಿಸಿ ಎಂದು ನೆರೆದಿದ್ದ ಸಾರ್ವಜನಿಕರಿಗೆ ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!