ಬೆಂಕಿಗೆ ಹುಲ್ಲಿನ ಬಣವೆ ಭಸ್ಮ

87

Get real time updates directly on you device, subscribe now.

ಕೊಡಿಗೇನಹಳ್ಳಿ: ಆಕಸ್ಮಿಕ ಬೆಂಕಿಗೆ ಸುಮಾರು 10 ಟ್ರ್ಯಾಕ್ಟರ್ ಲೋಡ್ನಷ್ಟು ಜಾನುವಾರು ಮೇವು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಹೋಬಳಿಯ ಕಡಗತ್ತೂರು ಗ್ರಾಪಂನ ಯಾಕಾರ್ಲಹಳ್ಳಿ ಗ್ರಾಮದ ರೈತ ನರಸೇಗೌಡ ಎಂಬುವವರು ತಮ್ಮ ಮನೆಯ ಖಾಲಿ ಜಾಗದಲ್ಲಿ ಜೋಳದ ಸಪ್ಪೆ ಸೇರಿದಂತೆ ಸುಮಾರು 10 ಟ್ರ್ಯಾಕ್ಟರ್ ಲೋಡ್ ನಷ್ಟು ಜಾನುವಾರು ಮೇವು ಸಂಗ್ರಹಿಸಿದ್ದರು, ಆಕ್ಮಿಸಿಕ ಬೆಂಕಿ ಬಿದ್ದಿದ್ದು ಗ್ರಾಮಸ್ಥರು ಬೆಂಕಿ ನಂದಿಸುವಷ್ಟರಲ್ಲಿ ಸಂಪೂರ್ಣ ಮೇವು ಸುಟ್ಟು ಕರಕಲಾಗಿದೆ.
ಬರಗಾಲದಲ್ಲಿ ಸಂಗ್ರಹಿಸಿದ್ದ ಮೇವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ದಿಕ್ಕೂ ತೋಚದನೆ ರೈತ ಕಂಗಾಲಾಗಿದ್ದಾನೆ, ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದು ಕೊಡಿಗೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!