4140 ಲೀಟರ್ ಅಕ್ರಮ ಮದ್ಯ ವಶ

342

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ತಾಲೂಕಿನ ಟಿ.ತಾಂಡ್ಯ ಹರೇನಹಳ್ಳಿ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 4140 ಲೀಟರ್ ಮದ್ಯ ಹಾಗೂ ಮದ್ಯ ಸಾಗಿಸಲು ಬಳಸುತ್ತಿದ್ದ ಬೈಕ್ನ್ನು ಹಾಗೂ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ನ್ಯಾಯಾಲಯದ ಬಂಧನಕ್ಕೆ ಚಿಕ್ಕನಾಯಕನಹಳ್ಳಿ ಅಬಕಾರಿ ಪೊಲೀಸರು ಒಪ್ಪಿಸಿದ್ದಾರೆ.
ತುಮಕೂರು ಜಿಲ್ಲೆ ಹಾಗೂ ತಿಪಟೂರು ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಚಿಕ್ಕನಾಯಕನಹಳ್ಳಿ ಅಬಕಾರಿ ಇಲಾಖೆಯವರು ಟಿ.ತಾಂಡ್ಯ ಹರೇನಹಳ್ಳಿ ರಸ್ತೆಯ ರಂಗನೇಹಳ್ಳಿ ಕ್ರಾಸ್ ಬಳಿ ಸುಜುಕಿ ಕಂಪನಿಯ ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದನ್ನು ಖಚಿತ ಮಾಹಿತಿ ಮೇರೆಗೆ ತಿಳಿದು ಅಕ್ರಮವಾಗಿ ಸಾಗಿಸುತ್ತಿದ್ದ 4140 ಲೀಟರ್ ಮದ್ಯ ಹಾಗೂ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಗಂಗರಾಜು, ಅಬಕಾರಿ ಉಪನಿರೀಕ್ಷಕರಾದ ಆಶಾ, ಪೂಜಾ, ಅಬಕಾರಿ ಇನ್ಸ್ಪೆಕ್ಟರ್ಗಳಾದ ಕೃಷ್ಣಮೂರ್ತಿ, ರಾಜಕುಮಾರ್, ರಮೇಶ್, ಸಿಬ್ಬಂದಿ ಮಂಜುನಾಥ್, ಚಿದಾನಂದ ಇದ್ದರು.

Get real time updates directly on you device, subscribe now.

Comments are closed.

error: Content is protected !!