ಕೋಟಿ ನಿರ್ಮಾಪಕ ರಾಮು ಅಂತ್ಯಕ್ರಿಯೆ ಪೂರ್ಣ

ಹುಟ್ಟೂರು ಕೊಡಿಗೆಹಳ್ಳಿಯಲ್ಲಿ ಸಂಸ್ಕಾರ- ಕುಟುಂಬಸ್ಥರ ಆಕ್ರಂದನ

199

Get real time updates directly on you device, subscribe now.

ಕುಣಿಗಲ್: ಕೋವಿಡ್ ಗೆ ಬಲಿಯಾದ ಖ್ಯಾತ ಚಿತ್ರ ನಿರ್ಮಾಪಕ ರಾಮು ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ತಾಲೂಕಿನ ಅಮೃತೂರು ಹೋಬಳಿಯ ಕೊಡಿಗೆಹಳ್ಳಿ ಗ್ರಾಮದ ಅವರ ಜಮೀನಿನಲ್ಲಿ ಮಂಗಳವಾರ ನೆರವೇರಿತು.
ಮಂಗಳವಾರ ಮಧ್ಯಾಹ್ನ12 ಗಂಟೆಗೆ ಅವರ ಮೃತದೇಹ ಗ್ರಾಮಕ್ಕೆ ಆಗಮಿಸಿತು, ಸಂಬಂಧಿಕರು, ಸ್ಥಳೀಯರು ಮೃತದೇಹ ಆಗಮನದ ಮುನ್ನವೆ ದಹನ ಮಾಡಲು ಅಗತ್ಯ ಸಿದ್ಧತೆ ಮಾಡಿದ್ದರು. ರಾಮು ಪತ್ನಿ ನಟಿ ಮಾಲಾಶ್ರೀ, ಪುತ್ರ ಆರ್ಯನ್, ಪುತ್ರಿ ಅನನ್ಯ ಸೇರಿದಂತೆ ಅಂತ್ಯಕ್ರಿಯೆ ನೆರವೇರಿಸಲು ಸರ್ಕಾರದ ಕೊವಿಡ್ ಮಾರ್ಗಸೂಚಿಯಂತೆ ಕೆಲವೇ ಮಂದಿ ಪಿಪಿಇ ಕಿಟ್ ಧರಿಸಿ ಪಾಲ್ಗೊಂಡರು.
ನಟಿಯ ಸಂಬಧಿಕರು, ಗ್ರಾಮಸ್ಥರು, ರಾಮು ಸಂಬಂಧಿಕರು ದೂರದಲ್ಲೆ ನಿಂತು ಕೊನೆಯಾತ್ರೆಗೆ ಸಾಕ್ಷಿಯಾದರು. ಪುತ್ರ ಅಂತಿಮ ವಿಧಿ ವಿಧಾನ ನೆರವೇರಿಸಿದ್ದು, ಅಗ್ನಿ ಸ್ಪರ್ಶಕ್ಕೂ ಮುನ್ನ ಪತ್ನಿ ಭಾವುಕರಾಗಿ ಅಂತಿಮ ನಮನ ಸಲ್ಲಿಸಿದ್ದು ನೆರೆದಿದ್ದ ಎಲ್ಲರೂ ಕಣ್ಣೀರು ಸುರಿಸುವಂತಾಯಿತು. ಕೋಟಿ ರಾಮು ಎಂದೆ ಹೆಸರು ಪಡೆದಿದ್ದ ರಾಮು ಚಿತ್ರ ನಿರ್ಮಾಪಕರಾದರೂ ಅಗಾಗ್ಗೆ ಊರಿಗೆ ಬಂದಾಗ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಎಲ್ಲರೊಂದಿಗೆ ಬೆರೆತು ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದುದನ್ನು ಸ್ಥಳೀಯರು ಸ್ಮರಿಸಿದರು.

Get real time updates directly on you device, subscribe now.

Comments are closed.

error: Content is protected !!