ನಾಗಸಂದ್ರ ಗ್ರಾಪಂ ಪಿಡಿಓ ಅಮಾನತು

145

Get real time updates directly on you device, subscribe now.

ಕುಣಿಗಲ್‌: 14ನೇ ಹಣಕಾಸು ಹಣ ದುರುಪಯೋಗ, ಕೆಲಸಕ್ಕೆ ಅನಧಿಕೃತ ಗೈರು ಹಾಜರಿಯ ಹಿನ್ನೆಲೆಯಲ್ಲಿ ನಾಗಸಂದ್ರ ಗ್ರಾಮ ಪಂಚಾಯಿತಿ ಪಿಡಿಒ ಹೆಚ್‌.ರಾಜಣ್ಣ ಅವರನ್ನು ಜಿಪಂ ಸಿಇಒ ಅಮಾನತು ಮಾಡಿ ಅದೇಶ ಮಾಡಿದ್ದಾರೆ.
ನಾಗಸಂದ್ರ ಗ್ರಾಪಂ ಪಿಡಿಒ ಹೆಚ್‌.ರಾಜಣ್ಣ, 14ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ 2.19 ಲಕ್ಷ ರೂ. ಹಣವನ್ನು ವಿವಿಧ ದಿನಾಂಕಗಳಲ್ಲಿ ಅಧ್ಯಕ್ಷರ ಸಹಿ ಮಾಡಿಸದೆ ಬೋಗಸ್‌ ಸಹಿ ಮಾಡಿರುವ ಬಗ್ಗೆ ತಾಪಂ ಇಒ ವರದಿಯಲ್ಲಿ ತಿಳಿಸಿದ್ದು, ಈ ಮೇರೆಗೆ ಪಿಡಿಒ ಮೇಲೆ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಪಂ ಲೆಕ್ಕಾಧಿಕಾರಿಗಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಸದರಿ ಪಿಡಿಒ ಹೆಚ್‌.ರಾಜಣ್ಣ 2021ರ ಏಪ್ರಿಲ್‌ 16 ರಿಂದಲೂ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿರುವುದು, 14ನೇ ಹಣಕಾಸು ಯೋಜನೆಯಡಿಯಲ್ಲಿ ಬಿಲ್ಲುಗಳನ್ನು ಆನ್‌ಲೈನ್‌ ಮೂಲಕವೆ ಪಾವತಿ ಮಾಡಬೇಕಾಗಿದ್ದು ನಿಯಮ ಉಲ್ಲಂಘಿಸಿ ಚೆಕ್‌ ಮೂಲಕ ಪಾವತಿ ಮಾಡಿರುವುದಾಗಿ ಲೆಕ್ಕಾಧಿಕಾರಿಗಳು ವರದಿ ನೀಡಿದ್ದರ ಮೇರೆಗೆ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಪಿಡಿಒ ಹೆಚ್‌.ರಾಜಣ್ಣ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!